ಭಟ್ಕಳ: ಮಳೆಗಾಳಿಗೆ ಸಿಲುಕಿಕೊಂಡಿರುವ ಮೀನುಗಾರಿಕಾ ದೋಣಿ; ನಾಲ್ಕು ಜನ ಮೀನುಗಾರರ ರಕ್ಷಣೆ

Source: S O News Service | By Staff Correspondent | Published on 20th September 2020, 6:43 PM | Coastal News |

ಭಟ್ಕಳ: ಮಳೆಗಾಳಿಗೆ ಸಿಲುಕಿ ಅಪಾಯದಲ್ಲಿರುವ ಮೀನುಗಾರರು ರಕ್ಷಣೆಗಾಗಿ ತಮ್ಮ ಸಂಬಂಧಿಕರಿಗೆ ಮೊರೆ ಹೋಗಿದ್ದು ಅಪಾಯದಲ್ಲಿದ್ದ ನಾಲ್ಕು ಮಂದಿ ಮೀನುಗಾರರನ್ನು ಅಬುಬಕರ್ ಎನ್ನುವವರ ದೋಣಿಯ ಮೂಲಕ ದಡಕ್ಕೆ ಸೇರಿಸಿದ ಘಟನೆ ಭಾನುವಾರ ಬೆಳಗಿನ ಜಾವ ಇಲ್ಲಿಗೆ ಸಮೀಪ ಕಾಗೆ ಗುಡ್ಡ ಸಮೀಪ  ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಪಾಯದಿಂದ ಪಾರಾಗಿರುವ ಮೀನುಗಾರರನ್ನು ಮಹಾರಾಷ್ಟ್ರ ಮೂಲದ ಸಚಿನ್ ಬೀರಪ್ಪ, ಹರೇಶ ತಾಂಡೇಲ್, ಜ್ಞಾನೇಶ ಕರಡಿಕರ್, ನಾರಾಯಣ ಬಾಹೇಬ ಎಂದು ಗುರುತಿಸಲಾಗಿದೆ. ಇವರು ರವಿವಾರ ಬೆಳಿಗ್ಗೆ ಮಾದೇವ ತಿಮ್ಮಪ್ಪ ಮೊಗೇರ ಮಾಲಕತ್ವದ `ದೇವಾನುಗ್ರಹ' ಹೆಸರಿನ ಯಾಂತ್ರೀಕೃತ ದೋಣಿಯಲ್ಲಿ ಶಿರಾಲಿ ಅಳ್ವೇಕೋಡಿಯಿಂದ ಮೀನುಗಾರಿಕೆಗೆ ತೆರಳಿದ್ದರು. ಕಡಲ ಅಲೆಗಳ ಹೊಡೆತಕ್ಕೆ ದೋಣಿಯ ಯಂತ್ರ ಕೆಟ್ಟು ಹೋಗಿದ್ದು, ಮೀನುಗಾರರು ದಡದತ್ತ ವಾಪಸ್ಸು ಬರಲಾಗದೇ ಕಂಗೆಟ್ಟಿದ್ದರು. 

ಅಬೂಬಕರ್ ಎನ್ನುವವರ ದೋಣಿಯ ಮೂಲಕ ವಿನೋದ ಮೊಗೇರ ಮುಂಡಳ್ಳಿ, ರೋಹಿದಾಸ ಮೊಗೇರ ಮುರುಡೇಶ್ವರ, ಕೃಷ್ಣ ಮೊಗೇರ ಬೆಳ್ನಿ ಹಾಗೂ ಮಂಜುನಾಥ ಮೊಗೇರ ಎನ್ನುವವರು ಅಪಾಯದಲ್ಲಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

ರವಿವಾರ ಸಂಜೆ 6.30 ಸುಮಾರಿಗೆ ಮೀನುಗಾರರನ್ನು ರಕ್ಷಿಸಿ ದಡಕ್ಕೆ ಕರೆ ತರಲಾಯಿತು. ದೋಣಿಯನ್ನು ಎಳೆದು ತರಲು ಸಾಧ್ಯವಾಗದ ಕಾರಣ, ಕರಿಕುಂದದ ಸಮೀಪವೇ ಹಗ್ಗ ಕಟ್ಟಿ ತೇಲಿ ಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...