ಅಂಕೋಲಾ : ಚಲಿಸುತ್ತಿದ್ದ ಕಾರೊಂದು ಪಲ್ಟಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿರುವ ಘಟನೆ ಅಂಕೋಲಾದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಹೆಬ್ಬುಳ ಗ್ರಾಮದ ರಾಷ್ಡ್ರೀಯ ಹೆದ್ದಾರಿ 63ರಲ್ಲಿ ಈ ಘಟನೆ ಸಂಭವಿಸಿದೆ. ಧಾರವಾಡ ಮೂಲದ ಹರಿ ಎಂಬುವವರು ಹುಬ್ಬಳ್ಳಿಯಿಂದ ಟಾಟಾ ಟಿಯಾಗೋ ಕಂಪನಿಯ ಕಾರಿನ ಮೂಲಕ ಕುಮಟಾ ಕಡೆ ಪ್ರಯಾಣಿಸುತ್ತಿದ್ದರು. ಆದರೆ ಹೆಬ್ಬುಳದ ಬಳಿ ಕಾರು ಪಲ್ಟಿಯಾದ ಕಾರಣ ಬೆಂಕಿ ಹೊತ್ತಿಕೊಂಡಿದ್ದು ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಅಂಕೋಲಾ ಅಗ್ನಿಶಾಮಕ ಠಾಣೆಯ ಅಧಿಕಾರಿ ಉಮೇಶ್ ಎನ್ ನಾಯ್ಕ, ಸಿಬ್ಬಂದಿಗಳಾದ ಜೀವನ ಬಾಬ್ರುಕರ್,
ರಾಮಪ್ಪ ಇಂಗಳಗಿ, ವಿಘ್ನೇಶ್ವರ ಎಂ ನಾಯ್ಕ , ಅಮಿತ್ ಸಿ ನಾಯ್ಕ ರವರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿದ್ದರು.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.