ಮುಂಡಗೋಡ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿ 6 ಜನರು ಗಾಯಗೊಂಡ ಘಟನೆ ತಾಲೂಕಿನ ಹುಬ್ಬಳ್ಳಿ- ಶಿರಸಿ ರಸ್ತೆಯ ಶಿಂಗನಹಳ್ಳಿ ಗ್ರಾಮದಲ್ಲಿ ಹತ್ತಿರ ಭಾನುವಾರ ಸಂಭವಿಸಿದೆ.
ಗಾಯಗೊಂಡವರನ್ನು ಶಿರಸಿ ತಾಲೂಕಿನ ರಾಮನಬೈಲ್ ದವರಾದ ಲಕ್ಷ್ಮೀ ಬಂಕಾಪುರ, ರಕ್ಷೀತಾ ವರ್ಣೇಕರ, ಪ್ರಜ್ಞಾ ಬಂಕಾಪುರ, ದೀಪಾ ಕುಂಬ್ರಿ, ವೀಣಾ ವರ್ಣೇಕರ ಹಾಗೂ ಚಾಲಕ ಮಂಜುನಾಥ ಬಂಕಾಪುರ ಗಾಯಗೊಂಡವರಾಗಿದ್ದಾರೆ.
ಕಾರು ಶಿರಸಿಯಿಂದ ಮುಂಡಗೋಡ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ಮುಂಡಗೋಡದಿಂದ ಶಿರಸಿ ಕಡೆಗೆ ಹೊರಟಿದ್ದ ಬಸ್ ಎದುರಿನಿಂದ ಬರುತ್ತಿರುವುದನ್ನುಕಂಡು ಚಾಲಕನು ಎಡಕ್ಕೆ ತಿರುವಿಸಿದ್ದಾನೆ ಚಾಲಕನ ನಿಯಂತ್ರಣ ತಪ್ಪಿ ಕಾರುಪಲ್ಟಿಯಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.