ಸಮುದ್ರದಲ್ಲಿ ಬಿದ್ದು ಮೀನುಗಾರ ಸಾವು

Source: so news | By MV Bhatkal | Published on 22nd May 2019, 1:26 AM | Coastal News | Don't Miss |


ಭಟ್ಕಳ: ಮೀನುಗಾರಿಕೆಗೆ ತೆರಳಿದ್ದ ಭಟ್ಕಳ ವ್ಯಕ್ತಿ ಕಾರವಾರದಿಂದ ಹೊರಗೆ ಅರಬ್ಬೀ ಸಮುದ್ರದಲ್ಲಿ ಅಕಸ್ಮಾತ್‌ ನೀರಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಇಲ್ಲಿನ ಜಾಲಿ ಪಪಂ ವ್ಯಾಪ್ತಿಯ ಚಂದ್ರು ಮೊಗೇರ ಎನ್ನುವವರೇ ಮೃತ ಪಟ್ಟವರಾಗಿದ್ದು ಇವರು ತಮ್ಮ ಸಹೋದರ ನಾರಾಯಣ ಮೊಗೇರ ಇವರೊಂದಿಗೆ ಮೀನುಗಾರಿಕೆಗೆ ತೆರಳಿದ್ದ ಸಮಯದಲ್ಲಿ ಕಾರವಾರದ ಬೈತಕೋಲ ಬಂದರದ ಸಮೀಪ ಲೈಟ್‌ಹೌಸ್‌ ಹತ್ತಿರದಲ್ಲಿ ಬಲೆಯನ್ನು ಹಾಕುತ್ತಿರುವಾಗ ಕಾಲಿಗೆ ಬಲೆ ಸಿಲುಕಿ ನೀರಿಗೆ ಬಿದ್ದರೆನ್ನಲಾಗಿದೆ. ತಕ್ಷಣ ಅವರನ್ನು ಮೇಲಕ್ಕೆತ್ತಿ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕರೆದುಕೊಂಡು ಹೋಗುವಾಗ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಶವ ಬಿಟ್ಟುಕೊಡಲಾಯಿತು

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...