ಭಟ್ಕಳ: ಪಾತಿ ದೋಣಿಯಲ್ಲಿ ಮೀನುಗಾರಿಕೆಗೆಂದು ತೆರಳಿದ ಮೀನುಗಾರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮುರುಡೇಶ್ವರದ ಸಮುದ್ರ ತೀರದಲ್ಲಿ ನಡೆದಿದೆ.
ಮೃತ ಮೀನುಗಾರ ಮಾಸ್ತಿ ನಾಗಯ್ಯ ಹರಿಕಾಂತ ಮಾವಳ್ಳಿ 1 ಪಟೇಲ್ ಗಾರ್ಡನ ನಿವಾಸಿ ಎಂದು ತಿಳಿದು ಬಂದಿದೆ. ಮನೆಯಿಂದ ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದಾಗ ದೋಣಿ ಮುಳುಗಿ ಸಾವನ್ನಪ್ಪಿದ್ದು ಸುಮಾರು ಗಂಟೆಗೆಳ ಬಳಿಗೆ ಮುರುಡೇಶ್ವದ ಸಮುದ್ರ ದಡದಲ್ಲಿ ಮೃತ ದೇಹ ಬಿದ್ದಿರುವುದನ್ನು ಸ್ಥಳೀಯರು ಗಮನಕ್ಕೆ ಬಂದಿದ್ದು ಮುರುಡೇಶ್ವರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ
ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಆನಂದ ನಾಗಯ್ಯ ಹರಿಕಾಂತ ಪ್ರಕರಣ ದಾಖಲಿಸಿದ್ದಾರೆ