ಕಾರವಾರ: ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಲು ಅಂತಿಮ ಅವಕಾಶ
ಕಾರವಾರ : ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಇ-ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು ಹೊರತುಪಡಿಸಿ ಉಳಿದಿರುವ ಫಲಾನುಭವಿಗಳ ಇ-ಕೆವೈಸಿಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಸೆಪ್ಟೆಂಬರ 1 ರಿಂದ 10 ವರೆಗೆ ನಡೆಸಲಾಗುತ್ತಿದೆ.
ಮುಂಬರುವ ದಿನಗಳಲ್ಲಿ ಇ-ಕೆವೈಸಿ ಮಾಡದ ಪಡಿತರ ಚೀಟಿದಾರರ ಪಡಿತರವನ್ನು ತಡೆ ಹಿಡಿಯ ಬಹುದಾಗಿದೆ. ಇ-ಕೆವೈಸಿ ಸಂಗ್ರಹಣೆಗೆ ಯಾರಾದರೂ ಹಣ ಕೇಳಿದ್ದಲ್ಲಿ ಅಥವಾ ದೂರುಗಳಿದ್ದಲ್ಲಿ ಹಾಗೂ ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ತಾಲೂಕು ತಹಶೀಲ್ದಾರರು ಮತ್ತು ಉಪನಿರ್ದೇಶಕರು ಆಹಾರ & ನಾಗರಿಕ ಸರಬರಾಜು ಇಲಾಖೆ ಇವರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಸಂಪರ್ಕಿಸಬಹುದಾ ಸಂಖ್ಯೆಗಳು:
ಉಪನಿರ್ದೇಶಕರು ಆಹಾರ & ನಾಗರಿಕ ಸರಬರಾಜು ಇಲಾಖೆ ಉತ್ತರ ಕನ್ನಡ ಕಾರವಾರ ರವರ ಕಚೇರಿ ದೂರವಾಣಿ ಸಂಖ್ಯೆ: 08382-226464. ಕಾರವಾರ: 9448609712, 08382-226331. ಅಂಕೋಲಾ :9845397078, 08388-230243 ಕುಮಟಾ : 9481557642, 08386-222054 ಹೊನ್ನಾವರ : 9980135812, 08387-220262, ಭಟ್ಕಳ : 8105180342, 08385-226422. ಶಿರಸಿ :9739717754, 08384-226383 ಸಿದ್ದಾಪುರ :8861641607, 08389-230127. ಯಲ್ಲಾಪುರ :8867113551, 08419-261129. ಮುಂಡಗೋಡ :9448893878, 08301-222122. ಹಳಿಯಾಳ :7483441715, 08284-220134, ದಾಂಡೇಲಿ :7676781182 ಜೋಯಿಡಾ :9448825842, 08383-282723 ಸಂಪರ್ಕಿಸಬಹುದು ಎಂದು ಆಹಾರ & ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.