ಫಾಝಿಲ್ ಕೊಲೆ ಪ್ರಕರಣ; 21ಕ್ಕೂ ಅಧಿಕ ಮಂದಿ ವಶಕ್ಕೆ: ಕಮಿಷನರ್‌ ಶಶಿಕುಮಾರ್

Source: VB | Published on 30th July 2022, 2:16 PM | Coastal News |

ಮಂಗಳೂರು : ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಈಗಾಗಲೇ 21ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ನಮ್ಮ ತನಿಖೆಯಲ್ಲಿ ಅವರೆಲ್ಲರೂ ಶಂಕಿತರು. ಅವರ ಸಂಘಟನೆ ಅಥವಾ ಇತರ ಯಾವುದೇ ಲಿಂಕ್ ಮುಖ್ಯವಲ್ಲ ಎಂದು ಪೊಲೀಸ್‌ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ವೆಬ್‌ ಸೈಟ್ ಒಂದರಲ್ಲಿ ಫಾಝಿಲ್ ಕೊಲೆ ಪ್ರಕರಣದಲ್ಲಿ 4 ಮಂದಿ ಬಜರಂಗದಳ‌ ಕಾರ್ಯಕರ್ತರು ವಶಕ್ಕೆ ಎಂಬ ವರದಿ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಈ ಪ್ರತಿಕ್ರಿಯೆ ನೀಡಿದ್ದಾರೆ.

Read These Next