ಕುಮಟಾದಲ್ಲಿ ಮಗನಿಂದ ತಂದೆ ಹತ್ಯೆ.
ಕುಮಟಾ : ಕ್ಷುಲ್ಲಕ ಕಾರಣಕ್ಕಾಗಿ ತಂದೆ ಮತ್ತು ಮಗನ ನಡುವೆ ಜಗಳ ನಡೆದು ಓರ್ವ ಕೊಲೆಯಾಗಿರುವ ಘಟನೆ ಕುಮಟಾ ತಾಲೂಕಿನ ಸಂತೆಗುಳಿಯ ಕಲವೆ ಗ್ರಾಮದಲ್ಲಿ ನಡೆದಿದೆ.
ರಾಮಚಂದ್ರ ಕುಪ್ಪಾ ಗೌಡ (55) ಕೊಲೆಯಾದವ ವ್ಯಕ್ತಿ. ತನ್ನ ಮಗ ಶ್ರೀಕಾಂತ ಗೌಡನಿಂದಲೇ ಕೊಲೆಯಾಗಿದ್ದಾನೆ. ಸೋಮವಾರ ರಾತ್ತಿ ಕುಡಿದ ಮತ್ತಿನಲ್ಲಿದ್ದ ಅಪ್ಪ ಮತ್ತು ಮಗ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡಿಕೊಂಡಿದ್ದಾರೆ. ಪರಸ್ಪರ ಜಗಳ ಮಾಡುತ್ತಾ ಮಗ ತಂದೆಯ ಕುತ್ತಿಗೆಗೆ ಚಾಕುವಿನಿಂದ ತಿವಿದಿದ್ದಾನೆ. ಪರಿಣಾಮವಾಗಿ ರಾಮಚಂದ್ರ ಸಾವನ್ನಪ್ಪಿದ್ದಾನೆ.
ಕುಮಟಾ ಪೊಲೀಸರು ಆರೋಪಿ ಶ್ರೀಕಾಂತ ಗೌಡನನ್ನ ಬಂಧಿಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.