ಹಾಸನ: ಯಾವುದೇ ರೈತ ಬ್ಯಾಂಕ್ಗಳಿಗೆ ಬಂದಾಗ ಸಕಾರಾತ್ಮಕವಾಗಿ ಮತ್ತು ಪಾರದರ್ಶಕವಾಗಿ ನಡೆದುಕೊಳ್ಳುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್ ಅವರು ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿಂದು ನಡೆದ ಬ್ಯಾಂಕ್ ಗಳ ಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ರೈತರನ್ನು ನಿಂದಿಸುವುದು, ಸರಿಯಾದ ಮಾಹಿತಿ ನೀಡದೆ ಅಲೆದಾಡಿಸುವ ಕುರಿತ ದೂರುಗಳಿದ್ದು, ಅದು ಮರುಕಳಿಸಬಾರದು, ಅವರಿಗೆ ಸೂಕ್ತ ಮಾಹಿತಿ ನೀಡಬೇಕೆಂದು ಹೇಳಿದರು.ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಇತರೆ ಇಲಾಖೆಗಳಿಂದ ರೈತರಿಗೆ ಸಬ್ಸಿಡಿ, ಲೋನ್ ಗಳ ಸೌಲಭ್ಯಗಳಿರುವ ಯೋಜನೆಗಳನ್ನು ಜಾರಿ ಮಾಡಲು ಬ್ಯಾಂಕ್ ಗಳಿಂದ ಸಾಲ ಮಂಜೂರಾತಿ ಪತ್ರ ಬೇಗ ಸಿಗದಿರುವುದರಿಂದ ಯೋಜನೆಗಳ ಅನುಷ್ಟಾನಕ್ಕೆ ತೊಂದರೆಯಾಗುತ್ತಿದ್ದು, ಅದು ಮುಂದುವರಿಯದಂತೆ ಜಿ.ಪಂ. ಸಿ.ಇ.ಒ. ಅಧಿಕಾರಿಗಳನ್ನು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ 2020-21ನೆ ಸಾಲಿನ ನಬಾರ್ಡ್ನಿಂದ ರೋಪಿಸಲಾದ ಸಾಮಥ್ರ್ಯ ಆಧಾರಿತ ಸಾಲ ಯೋಜನೆ (ಪಿಎಲ್ಪಿ)ಯನ್ನು ಜಿ.ಪಂ. ಸಿ.ಇ.ಒ. ಬಿಡುಗಡೆ ಮಾಡಿದರು.
ನರ್ಬಾಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಾದ ವಿ.ಜಿ.ಭಟ್ ಅವರು ಮಾತನಾಡಿ 8178.63 ಕೋಟಿ ರೂಪಾಯಿಗಳನ್ನು ಸಾಮಥ್ರ್ಯ ಆಧಾರಿತ ಸಾಲ ಯೋಜನೆಯ ಸಂಬಂಧ ಆಧ್ಯತೆಯ ಮೆರೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಈ ಯೋಜನೆಯಲ್ಲಿ ಕೃಷಿಗಾಗಿ 5341.13 ಕೋಟಿಗಳನ್ನು, ಕೃಷಿ ಪೂರಕ ಚಟುವಟಿಕೆಗಳಿಗಾಗಿ 459.83 ಕೋಟಿಗಳನ್ನು ಎಮ್ಎಸ್ಎಂಇ ಗಾಗಿ 941.99 ಕೋಟಿಗಳನ್ನು, ಶಿಕ್ಷಣಕ್ಕಾಗಿ 99.60 ಕೋಟಿಗಳನ್ನು ಹಾಗೂ ಗೃಹ ನಿರ್ಮಾಣಕ್ಕಾಗಿ 768 ಕೋಟಿಗಳನ್ನು ವ್ಯಯಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಲನ್ನು ಉಪಯೋಗಿಸಿಕೊಂಡು ಸಾಲ ನೀಡುವ ಮೂಲಕ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೆಂದ್ರ ರಾಜ್ಯ ಸರ್ಕಾರಗಳ ಕಾರ್ಯಕ್ರಮ ಮತ್ತು ಯೋಜನೆಗಳು, ಮಾರುಕಟ್ಟೆ ಸೌಲಭ್ಯ, ಮೂಲಭೂತ ಸೌಕರ್ಯಗಳನ್ನು ಪರಿಗಣಿಸಿ ಪಾಲುದಾರರೊಂದಿಗೆ ಚಚಿಸಿ ಪಿ.ಎಲ್.ಪಿ… ಯನ್ನು ತಲಾರಿಸಲಾಗಿದೆ ಹಾಗೂ ಇದರ ಆಧಾರದ ಮೇಲೆ ಜಿಲ್ಲಾ ಕ್ರೇಡಿಟ್ ಪ್ಲಾನ್ಅನ್ನು ತಯಾರಿಸಾಗುವುದು ಎಂದು ವಿ.ಜಿ. ಭಟ್ ಅವರು ತಿಳಿಸಿದರು.
ಸ್ಕಿಲ್ ಡೆವಲಪ್ಮೆಂಟ್ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ ಯುವಜನರನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಆರ್.ಎಸ್.ಇ.ಟಿ.ಐ. ತರಬೇತಿ ಸಂಸ್ಥೆಯನ್ನು ಆರ್.ಬಿ.ಐ.ನ ಎ.ಜಿ.ಎಂ. ರಾಜಗೋಪಾಲ್ ಅವರು ಪ್ರಶಂಶಿಸಿದರು.
ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಬಸವರಾಜು ಅವರು ಮಾತನಾಡಿ ಒಂದು ಕಡೆಯ ಆದೇಶದಿಂದ ಪ್ರಗತಿ ಕಾರ್ಯಗಳು ನಡೆಯುವುದಿಲ್ಲ ಹಾಗಾಗಿ ಪೂರ್ಣ ಸಹಕಾರ ನೀಡಿ ಕಾರ್ಯನಿರ್ವಹಿಸಬೇಕು ಮತ್ತು ಕಾಲಕಾಲಕ್ಕೆ ಸಮರ್ಪಕವಾಗಿ ದಾಖಲಾತಿಗಳನ್ನು ಸಂಗ್ರಹಿಸಬೇಕು ಹಾಗೂ ಬ್ಯಾಂಕ್ಗಳ ಅಧಿಕಾರಿಗಳು ಶೇಕಡಾ ನೂರರಷ್ಟು ಪಕ್ಕಾ ದಾಖಲಾತಿಗಳನ್ನು ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಕೃಷಿ ತೋಟಗಾರಿಕೆ, ಪಶುಸಂಗೋಪನೆ, ಕಾರ್ಮಿಕ ಇಲಾಖೆ ಅಧಿಕಾರಿಗಳು, ಜಿಲ್ಲೆಯ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಹಾಜರಿದ್ದರು.