ಚಲಿಸುತ್ತಿದ್ದ ರೈಲಿನಿಂದ ಬಿದ್ದು ಪ್ರಯಾಣಿಕ ದುರ್ಮರಣ.

Source: SO News | By Laxmi Tanaya | Published on 23rd September 2020, 1:21 PM | Coastal News | Don't Miss |

ಹೊನ್ನಾವರ :  ತಾಲೂಕಿನ ಮಂಕಿ ರೈಲ್ವೆ ನಿಲ್ದಾಣದ ಬಳಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಸಂತೋಷಕುಮಾರ ಎಂ (48) ಮೃತ ದುರ್ದೈವಿಯಾಗಿದ್ದಾನೆ.

ಈತ ಸೌಥ ದೆಹಲಿ ಮೂಲದವನೆಂದು ಹೇಳಲಾಗುತ್ತಿದ್ದು,  ದೆಹಲಿಯಿಂದ ತ್ರಿವೆಂಡ್ರಮ್ ಗೆ ತೆರಳುವ ಮಂಗಲಾ ಎಕ್ಸಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ಈತ ಟಿಕೇಟ್ ತೆಗೆಯದೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರಿಂದ   ಮಥುರಾ ರೈಲ್ವೆ ನಿಲ್ದಾಣದಲ್ಲಿ  ದಂಡ ಹಾಕಲಾಗಿತ್ತು. ದಂಡ ನೀಡಿ ತನ್ನ ಪ್ರಯಾಣ ಮುಂದುವರಿಸಿದ್ದನು. ಮಂಕಿ ಬಳಿ ರೈಲ್ವೆ ನಿಲ್ದಾಣದ ಬಳಿ ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ.

ರೈಲು ಹೊರಡುವ ವೇಳೆಯೇ ಜಿಗಿದು ಕೆಳಕ್ಕೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸೊಂಟದ ಭಾಗ ಸಂಪೂರ್ಣ ಗಾಯವಾದ ರೀತಿಯಲ್ಲಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ  ಪ್ರಕರಣ ದಾಖಲಾಗಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...