ಕಣ್ಣುಕಣ್ಣು ಕಲೇತ ವಿಚ್ಚೆದಿತೆ ಹಾಗೂ ವಿಧುರ ಜೋಡಿಗೆ ಮದುವೆ ಮಾಡಿಸಿದ ಸಾಧನ ಮಹಿಳಾ ಸಾಂತ್ವನ ಸಂಸ್ಥೆ

Source: S.O. News Service | By MV Bhatkal | Published on 17th July 2019, 7:03 PM | Coastal News | Don't Miss |

ಮುಂಡಗೋಡ : ಪಾಲಕರ ಮಾತನ್ನು ದಿಕ್ಕರಿಸಿ ಮೂರು ಮಕ್ಕಳ ವಿದುರನನ್ನು ವಿಚ್ಚೇದಿತೆ ಮಹಿಳೆ  ಸಾಧನ ಸಾಂತ್ವನ ಕೇಂದ್ರದ ಸಹಕಾರದಿಂದ ಮದುವೆಯಾದ ಘಟನೆ ನಡೆದಿದೆ
ವಿಚ್ಚೇದಿತ ಮಹಿಳೆಯನ್ನು ಜಿಲ್ಲೆಯ ಯಲ್ಲಾಪುರ ಪಟ್ಟಣದ ರಜೀಯಾ(ಅಫ್ಸಾನ) ಮಹ್ಮದ ಶೇಖ(28) ಎಂದು ಹೇಳಲಾಗಿದೆ ಹಾಗೂ ವಿದುರನನ್ನು ಧಾರವಾಡ ಪಟ್ಟಣದ ಮಾದರಮಡ್ಡಿ ತಲವಾರ ಓಣಿಯ ಅಯ್ಯೂಬ ತಡಕೋಡ(35) ಎಂದು ತಿಳಿದು ಬಂದಿದೆ. ವಿಚ್ಚೇದಿತೆ ರಜೀಯಾ ಗೆ ಮಕ್ಕಳಾಗಿರಲಿಲ್ಲ ಎಂದು ಹೇಳಲಾಗಿದೆ
ರಜೀಯಾ ಶೇಖ ಈ ಮೊದಲು ಬೆಳಗಾಂವ ಗೆ ಮದುವೆ ಮಾಡಿಕೊಡಲಾಗಿತ್ತು ನಂತರ ವಿಚ್ಚೇದನ ಪಡೆದು ತವರು ಮನೆಯಲ್ಲಿದ್ದಳು ಅಯ್ಯೂಬ ನಿಗೆ ಹೆಂಡತಿ ಮೃತಪಟ್ಟ ಕಾರಣ ಪಾಲಕರು ಮತ್ತೊಂದು ಮದುವೆ ಮಾಡಲು ವಧುವಿನ ಹುಡಕಾಟದಲ್ಲಿದ್ದರು. ಯಲ್ಲಾಪುರದಲ್ಲಿರುವ ರಜೀಯಾ ಮನೆಗೆ ಬಂದು ತಮ್ಮ ಹುಡುಗಿ ಒಪ್ಪಿಗೆ ಸೂಚಿಸಿದ್ದರು. ಆದರೆ ರಜೀಯಾ ಮನೆಯವರು ಹುಡುಗ ಬಡವನಿದ್ದಾನೆ ಎಂದು ವಿರೋಧ ವ್ಯಕ್ತವಾಗಿತ್ತು. ರಜೀಯಾ ಮನೆಯವರು ಮತ್ತೆ ಬೇರೆ ವರನನ್ನು ಮದುವೆ ಮಾಡಿಕೊಡಬೇಕು ಎಂದು ವರನ ತಲಾಶ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ರಜೀಯಾಗೆ ಅಯ್ಯೂಬನನ್ನೆ ಮದುವೆ ಮಾಡಿಕೊಳ್ಳಬೇಕು ಮನಸ್ಸು ಮಾಡಿ ಪಾಲಕರ ವಿರೋಧ ನಡುವಿಯೇ ರಜೀಯಾ ಮನೆಯಿಂದ ಹೊರಟು ಅಯ್ಯೂಬನನ್ನು ಹುಡುಕುತ್ತಾ ಧಾರವಾಡಕ್ಕೆ ಹೋಗುವಾಗ ಪೊಲೀಸರ ಸಹಾಯ ಪಡೆದು ಸಾಧನಾ  ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದಿದ್ದು ಸಾಂತ್ವನ ಕೇಂದ್ರದ ಮುಖ್ಯಸ್ಥೆ ಡಾ.ಇಸಬೇಲ್ಲ ಜೇವಿಯರ್  ರಜೀಯಾಳನ್ನು ವಿಚಾರಿಸಿ ನಂತರ ಧಾರವಾಡದ ಅಯ್ಯೂಬ ನನ್ನು ವಿಚಾರಣೆ ಮಾಡಿದ್ದು ಇಬ್ಬರೂ ಮದುವೆಗೆ ಒಪ್ಪಿಗೆ ಸೂಚಿಸಿದ ಕಾರಣ ಮಂಗಳವಾರ ಮುಂಡಗೋಡಿನ ಸಾಧನಾ ಸಂಸ್ಥೆಯಲ್ಲಿ ಅಯ್ಯೂಬನ ಕುಟುಂಬಸ್ಥರ ಮಧ್ಯಯೇ ಮದುವೆ ಮಾಡಿಸಲಾಯಿತು ತದನಂತರ ಧಾರವಾಡದ ಸಂಗೋಳ್ಳಿ ರಾಯಣ್ಣ ಜಮಾತಿನಲ್ಲಿ ಇಸ್ಲಾಂ ಧರ್ಮದ ಪ್ರಕಾರ  ಮದುವೆಯಾಗಿದೆ.

 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...