ಶಿವಮೊಗ್ಗ : ತೀರ್ಥಹಳ್ಳಿಯ ಇಂದಿರಾನಗರ, ತಾಲೂಕಿನ ಮಾರಿಗುಣಿ, ತಲ್ಲೂರು ಅಂಗಡಿ ಕೈಮರ ಗ್ರಾಮಗಳಲ್ಲಿ ಅಬಕಾರಿ ಇಲಾಖೆಯ ಆಯುಕ್ತರು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಅಂದಾಜು 1.50 ಲಕ್ಷ ಮೌಲ್ಯದ 145.980 ಲೀಟರ್ ಮಧ್ಯ ಮತ್ತು 5.940 ಲೀ. ಬಿಯರ್ ಹಾಗೂ ಒಂದು ಆಟೋರಿಕ್ಷಾವನ್ನು ವಶಪಡಿಸಿಕೊಂಡು 03 ಪ್ರಕರಣಗಳನ್ನು ದಾಖಲಿಸಿದ್ದಾರೆ
ಘಟನೆಯಲ್ಲಿ ನಾಗರಾಜ್ ಬಿನ್ ಮಂಜಪ್ಪ ಮತ್ತು ರವಿ ಬಿನ್ ಹಾಗನಾಥ ಶೆಟ್ಟಿ ಎಂಬುವವರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತ ಡಾ|| ಬಾಲಕೃಷ್ಣ ಸಿ.ಹೆಚ್. ಅವರ ನಿರ್ದೇಶನದಲ್ಲಿ ಅಬಕಾರಿ ನಿರೀಕ್ಷಕ ಹಾಲಾ ನಾಯ್ಕ ಮತ್ತು ಉಪ ನಿರೀಕ್ಷಕ ಜಾನ್ ಪಿ.ಜೆ, ಸಿಬ್ಬಂದಿಗಳಾದ ರಂಜನ್, ನಾಗರಾಜ್, ವಾಹನ ಚಾಲಕ ಅರ್ಜುನ್ ಭಾಗವಹಿಸಿದ್ದರು.