ಕಾರವಾರ : ಸರ್ ಎಂ ವಿಶ್ವೇಶ್ವರಯ್ಯ ಜನ್ಮ ದಿನದ ಪ್ರಯುಕ್ತ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇತ್ತೀಚೆಗೆ ಇಂಜಿನೀಯರ್ಸ್ ಡೇ ಆಚರಣೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಇಂಜಿನೀಯರಿಂಗ್ ಫಾರ್ ಚೇಂಜ್ ಎಂಬ ವಿಷಯದ ಮೇಲೆ ಕಾರವಾರ ಸರಕಾರಿ ಇಂಜಿನೀಯರಿಂಗ ಕಾಲೇಜಿನ ಇ & ಸಿ ವಿಭಾಗದ ವಿಭಾಗಾಧಿಕಾರಿ ವ್ಯಾಸ ಅವರು ಅತಿಥಿ ಉಪನ್ಯಾಸ ನೀಡಿದರು.
ಸಂಸ್ಥೆಯ ಪ್ರಾಂಶುಪಾಲರಾದ ವಿ. ಎಂ. ಹೆಗಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸತೀಶ್ ಎಸ್, ಶಾಂತಾರಾಮ, ಸತೀಶ್ ಗಾವಂಕರ್ ನಾಗರಾಜ ಜೋಶಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳಾದ ಅನಂತ್ ಆರ್ ಜೋಶಿ ಸ್ವಾಗತಿಸಿದರು. ಪ್ರಕಾಶ ವಡ್ಡರ್ ನಿರೂಪಿಸಿದರು.
ವಿದ್ಯುತ್ ದುರುಪಯೋಗ ಕಂಡು ಬಂದಲ್ಲಿ ಮಾಹಿತಿ ನೀಡಿ
ಕಾರವಾರ: ಜಿಲ್ಲೆಯಾದ್ಯಂತ ವಿದ್ಯುತ್ ಕಳ್ಳತನ ಹಾಗೂ ದುರುಪಯೋಗ ಕಂಡುಬಂದಲ್ಲಿ ಹೆಸ್ಕಾಂ ನಿರೀಕ್ಷಕರಿಗೆ ಮಾಹಿತಿ ನೀಡುವಂತೆ ಹೆಸ್ಕಾಂ ಅಧಿಕಾರಿ ಪ್ರಕಟಣೆಯಲ್ಲಿ ಕೋರಿರುತ್ತಾರೆ.
ದೂರು ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08382-223908, 9448043907, 7760128227 ಹಾಗೂ ಇಮೈಲ್ ವಿಳಾಸ [email protected] ಗೆ ಸಂಪರ್ಕಿಸಲು ತಿಳಿಸಲಾಗಿದೆ.