ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, “ಜ್ಞಾನ ಸಂಗಮ”, ಬೆಳಗಾವಿಯಲ್ಲಿ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನದ ಅಂಗವಾಗಿ “ಇಂಜಿನೀಯರ್ಸ್ ದಿನಾಚರಣೆ”ಯನ್ನು ಆಚರಿಸಲಾಯಿತು.
ವಿಶ್ವವಿದ್ಯಾಲಯದ ಕುಲಪತಿ ಡಾ. ಕರಿಸಿದ್ದಪ್ಪ ಅವರು ವಿಶ್ವೇಶ್ವರಯ್ಯನವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ಸರ್ ಎ0. ವಿಶ್ವೇಶ್ವರಯ್ಯನವರು ತಮ್ಮ ಸರಳ ಜೀವನ ಶೈಲಿ, ಅಪಾರ ಬುದ್ದಿವ0ತಿಕೆ ಹಾಗೂ ವೃತ್ತಿಶೀಲತೆ ಮು0ತಾದ ಗುಣಗಳಿ0ದ ನಮ್ಮ ದೇಶದ ಇತಿಹಾಸದಲ್ಲಿ ದ0ತಕಥೆಯಾಗಿದ್ದಾರೆ” ಎ0ದು ಹೇಳಿದರು. ನಮ್ಮ ನಾಡಿನ ಬ್ಯಾ0ಕಿ0ಗ್, ನೀರಾವರಿ, ಕೈಗಾರಿಕೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸರ್ ಎ0.ವಿಯವರ ಕೊಡುಗೆಗಳು ಅಪಾರ, ಅದಕ್ಕಾಗಿ ನಾವೆಲ್ಲರೂ ಸರ್ ಎ0.ವಿ. ಅವರಿಗೆ ನಿಜವಾಗಿ ಗೌರವ ಸಲ್ಲಿಸಬೇಕೆ0ದು ಕರೆ ನೀಡಿದರು.
ಕುಲಸಚಿವರಾದ ಡಾ. ಎ. ಎಸ್. ದೇಶಪಾಂಡೆ, ಹಣಕಾಸು ಅಧಿಕಾರಿಗಳಾದ ಶ್ರೀಮತಿ ಎಂ. ಎ. ಸಪ್ನಾ, ಸ್ಥಾನಿಕ ಅಭಿಯಂತರರಾದ ಹೇಮಂತಕುಮರ, ವಿಶ್ವವಿದ್ಯಾಲಯದ ಭೋದಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.