ಭಟ್ಕಳದಲ್ಲಿ ನೌಕರರ ಕ್ರಿಕೆಟ್ ಪಂದ್ಯಾವಳಿ. ಫೈನಲ್ ಪಂದ್ಯದಲ್ಲಿ‌ ಹೆಸ್ಕಾಂ ವಿರುದ್ಧ ಪೊಲೀಸ್ ತಂಡಕ್ಕೆ ರೋಚಕ ಜಯ.

Source: SO News | By Laxmi Tanaya | Published on 10th January 2021, 10:03 PM | Coastal News | Don't Miss |

ಭಟ್ಕಳ : ತಾಲೂಕಿನ ಸರಕಾರಿ ನೌಕರರ ಕ್ರೀಡಾ ಸಮಿತಿಯ ಸಹಯೋಗದಲ್ಲಿ,ವಿವಿಧ ಇಲಾಖೆಗಳ ನೌಕರರ  ಕ್ರಿಕೆಟ್ ಪಂದ್ಯಾವಳಿ ಭಟ್ಕಳದ ಪೊಲೀಸ್ ಕ್ರೀಡಾಂಗಣದಲ್ಲಿ ಜರುಗಿತು.

ಒಟ್ಟು 8 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಹೆಸ್ಕಾಂ ಹಾಗೂ ಪೊಲೀಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದ ರೋಚಕ  ಹಣಾಹಣಿಯಲ್ಲಿ ಪೊಲೀಸ್ ತಂಡ ಜಯಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 

ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಟ್ಕಳ ಸಿಪಿಐ  ದಿವಾಕರ್,  ಪಿಎಸ್ಐ ಭರತ್ ವಿ. ಹಾಗೂ ಎಚ್.ಬಿ. ಕುಡಗುಂಟಿ. ಕ್ರೀಡಾ ಸಮಿತಿಯ ಅಧ್ಯಕ್ಷರು ಹಾಗೂ ಭಟ್ಕಳ ಕ..ರಾ.ಸ.ನೌ.ಸಂಘದ ಸದಸ್ಯರಾದ ವೆಂಕಟೇಶ ನಾಯ್ಕ, ಹೆಸ್ಕಾಂ ನ ಶೇಖರ್ ಪೂಜಾರಿ, ನಾಗೇಶ ಲಮಾಣಿ ಹಾಗೂ ಹೆಸ್ಕಾಂ ಯೂನಿಯನ್ ನ ಪದಾಧಿಕಾರಿ ಯಾದ  ಶ್ರೀಧರ  ನಾಯ್ಕ ಹಾಗೂ ಕ.ರಾ.ಸ.ನೌಕರರ ಸಂಘದ ಸದಸ್ಯರುಗಳಾದ  ಬಿ.ಕೆ.ನಾಯ್ಕ ಹಾಗೂ  ಗಣೇಶ ಹೆಗಡೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು  ಗಣೇಶ ಹೆಗಡೆ ನಿರೂಪಿಸಿ ವಂದಿಸಿದರು. ವಿವಿಧ ಇಲಾಖೆಗಳ ನೌಕರರನ್ನು ಒಂದೇ ವೇದಿಕೆಯಡಿಯಲ್ಲಿ ಸಂಘಟಿಸುವ ಕೆಲಸಕ್ಕೆ  ವೆಂಕಟೇಶ ನಾಯ್ಕ ಅವರು  10 ವರ್ಷಗಳ ಹಿಂದೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಈ ಕ್ರೀಡಾಕೂಟ ನಿರಂತರವಾಗಿ ಎಲ್ಲಾ ಇಲಾಖೆಗಳ ನೌಕರರ ಸಹಾಯ ಸಹಕಾರದೊಂದಿಗೆ ನಡೆದುಕೊಂಡು ಬರುತ್ತಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...