ಭಟ್ಕಳ : ತಾಲೂಕಿನ ಸರಕಾರಿ ನೌಕರರ ಕ್ರೀಡಾ ಸಮಿತಿಯ ಸಹಯೋಗದಲ್ಲಿ,ವಿವಿಧ ಇಲಾಖೆಗಳ ನೌಕರರ ಕ್ರಿಕೆಟ್ ಪಂದ್ಯಾವಳಿ ಭಟ್ಕಳದ ಪೊಲೀಸ್ ಕ್ರೀಡಾಂಗಣದಲ್ಲಿ ಜರುಗಿತು.
ಒಟ್ಟು 8 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಹೆಸ್ಕಾಂ ಹಾಗೂ ಪೊಲೀಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಪೊಲೀಸ್ ತಂಡ ಜಯಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಪಂದ್ಯದ ಬಳಿಕ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಟ್ಕಳ ಸಿಪಿಐ ದಿವಾಕರ್, ಪಿಎಸ್ಐ ಭರತ್ ವಿ. ಹಾಗೂ ಎಚ್.ಬಿ. ಕುಡಗುಂಟಿ. ಕ್ರೀಡಾ ಸಮಿತಿಯ ಅಧ್ಯಕ್ಷರು ಹಾಗೂ ಭಟ್ಕಳ ಕ..ರಾ.ಸ.ನೌ.ಸಂಘದ ಸದಸ್ಯರಾದ ವೆಂಕಟೇಶ ನಾಯ್ಕ, ಹೆಸ್ಕಾಂ ನ ಶೇಖರ್ ಪೂಜಾರಿ, ನಾಗೇಶ ಲಮಾಣಿ ಹಾಗೂ ಹೆಸ್ಕಾಂ ಯೂನಿಯನ್ ನ ಪದಾಧಿಕಾರಿ ಯಾದ ಶ್ರೀಧರ ನಾಯ್ಕ ಹಾಗೂ ಕ.ರಾ.ಸ.ನೌಕರರ ಸಂಘದ ಸದಸ್ಯರುಗಳಾದ ಬಿ.ಕೆ.ನಾಯ್ಕ ಹಾಗೂ ಗಣೇಶ ಹೆಗಡೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗಣೇಶ ಹೆಗಡೆ ನಿರೂಪಿಸಿ ವಂದಿಸಿದರು. ವಿವಿಧ ಇಲಾಖೆಗಳ ನೌಕರರನ್ನು ಒಂದೇ ವೇದಿಕೆಯಡಿಯಲ್ಲಿ ಸಂಘಟಿಸುವ ಕೆಲಸಕ್ಕೆ ವೆಂಕಟೇಶ ನಾಯ್ಕ ಅವರು 10 ವರ್ಷಗಳ ಹಿಂದೆ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಈ ಕ್ರೀಡಾಕೂಟ ನಿರಂತರವಾಗಿ ಎಲ್ಲಾ ಇಲಾಖೆಗಳ ನೌಕರರ ಸಹಾಯ ಸಹಕಾರದೊಂದಿಗೆ ನಡೆದುಕೊಂಡು ಬರುತ್ತಿದೆ.