ಮುಂಡಗೋಡ : ಕಾಡಾನೆಗಳನ್ನು ಓಡಿಸಲು ಹೋಗಿದ್ದ ಅರಣ್ಯ ಇಲಾಖೆ ಯ ಸಿಬ್ಬಂದಿ ಮೇಲೆ ಗಂಡಾನೆ ಬೆನ್ನಟ್ಟಿದ್ದ ಪರಿಣಾಮ ಇಬ್ಬರು ಫಾರೆಸ್ಟರ ಜೀವಪಾಯದಿಂದ ಪಾರಾದ ಘಟನೆ ಚವಡಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಡಿ.4 ರಂದು ರಾತ್ರಿ ತಾಲೂಕಿನ ಚೌವಡಳ್ಳಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಮಾಡುತ್ತಿರುವಾಗ ಗಂಡಾನೆಯೊಂದು ಅರಣ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಬೆನ್ನಟ್ಟಿದೆ ಪ್ರಾಣವನ್ನು ಉಳಿಸುಕೊಳ್ಳಲು ಸಿಬ್ಬಂದಿ ದಿಕ್ಕಾಪಾಲಾಗಿ ಓಡಿದ್ದಾರೆ ಆದರೆ ಫಾರೆಸ್ಟರಗಳಾದ ಬಸವರಾಜ ಪೂಜಾರ ಹಾಗೂ ಫಕ್ಕಿರೇಶ ಸುಣಗಾರ ರತ್ತ ದಾಳಿನಡೆಸಲು ಆನೆ ಓಡಿಬರಲು ಪ್ರಾರಂಭಿಸಿದ ಪರಿಣಾಮ ಇಬ್ಬರು ಫಾರೆಸ್ಟರಗಳನ್ನು ದಾಳಿಯಿಂದ ತಪ್ಪಿಸಿಕೊಳ್ಳಲು ಓಡಲು ಪ್ರಾರಂಭಿಸಿ ಕತ್ತಲಲ್ಲಿ ಸುಮಾರು ಒಂದು ಮೀಟರ್ ಆಳದ ಕಂದಕದಲ್ಲಿ ಬಂದು ಬಿದ್ದಿದ್ದಾರೆ ಆನೆ ಬಂದು ಕಂದಕದ ಹತ್ತಿರ ಬಂದು ನಿಂತಿದೆ ಇತರೆ ಸಿಬ್ಬಂದಿಗಳು ಅವರ ಹೆಸರು ತೆಗೆದುಕೊಂಡು ಕೂಗಿದ್ದಾರೆ ಕಂದಕ ದಲ್ಲಿ ಬಿದ್ದಿರುವ ಫಾರೆಸ್ಟರಗಳು ಯಾವುದಕ್ಕೂ ಪ್ರತಿಯುತ್ತರ ನೀಡದೆ ಪ್ರಾಣ ಭಯದಿಂದ ಬಾಯಿಯನ್ನು ಮುಚ್ಚಿಕೊಂಡು ಕಂದಕದಲ್ಲಿ ಒರಗಿಕೊಂಡಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಆನೆಹೋಗಿದೆ ಎಂದು ತಿಳಿದುಕೊಂಡ ಮೇಲೆ ಮೇಲಕ್ಕೆ ಬಂದಿದ್ದಾರೆ.
ಓಡುತ್ತಿರುವ ಸಂದರ್ಭದಲ್ಲಿ ಬಸವರಾಜ ಪೂಜಾರ ಅವರ ಕಾಲಿಗೆ ಬಲವಾದ ಪೆಟ್ಟುಬಿದ್ದ ಪರಿಣಾಮ ಆಸ್ಪತ್ರೆ ಸೇರಿದ್ದಾರೆ. ಫಕ್ಕಿರೇಶ ಸುಣಗಾರ ರವರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.