ಭಟ್ಕಳ: ಇಂಡಿಯನ್ ಆಯಿಲ್ ಕಾರ್ಪರೇಶನ್, ರಂಜನ್ ಇಂಡೇನ್ ಎಜೆನ್ಸಿ, ರಫಾತ್ ಎಜೆನ್ಸಿ, ಪತ್ರಕರ್ತರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸಕ್ಷಮ ಕಾರ್ಯಕ್ರಮ ಹಾಗೂ ಪ್ರಧಾನ ಮಂತ್ರಿ ಎಲ್ಪಿಜಿ ಕಾರ್ಯಕ್ರಮ ನಡೆಯಲಿದೆ ಎಂದು ರಂಜನ್ ಇಂಡೇನ್ ಎಜೆನ್ಸಿ ಮಾಲಕಿ ಶಿವಾನಿ ಶಾಂತರಾಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಭಟ್ಕಳದ ಬೆಳಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.19ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಕ್ಷಮ ಕಾರ್ಯಕ್ರಮವನ್ನು ಶಾಸಕ ಸುನೀಲ ನಾಯ್ಕ ಉದ್ಘಾಟಿಸಲಿದ್ದಾರೆ. ಐಒಸಿಲ್ನ ಬೆಳಗಾವಿಯ ಮುಖ್ಯ ಪ್ರದೇಶ ವ್ಯವಸ್ಥಾಪಕ ವಿ ರಮೇಶ ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜಿ, ಹುಬ್ಬಳ್ಳಿ ಎಲ್ಪಿಜಿ ಸೇಲ್ಸ್ನ ಪಿ.ವಿ.ಆರ್ ಭಾರ್ಗವ, ಬೆಳಕೆ ಸರ್ಕಾರಿ ಪ್ರೌಡಶಾಲೆಉ ಮುಖ್ಯೋಪಾಧ್ಯಾಯ ಸಿ.ಎಸ್ ಬೈಲೂರು, ಪತ್ರಕರ್ತ ಸಂಘದ ಅಧ್ಯಕ್ಷ ರಾಮಚಂದ್ರ ಕಿಣಿ ಭಾಗವಹಿಸಿಲಿದ್ದಾರೆ. ಈ ಸಂದರ್ಬದಲ್ಲಿ ವಿದ್ಯಾರ್ಥಿಗಳಿಗಾಗಿ ಎರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ನಂತರ 11 ಗಂಟೆಗೆ ಅರ್ಬನ ಬ್ಯಾಂಕಿನ ಹಾಲಿನಲ್ಲಿ ನಡೆಯುವ ಪ್ರಧಾನ ಮಂತ್ರಿ ಎಲ್ಪಿಜಿ ಕಾರ್ಯಕ್ರಮವನ್ನು ಸಹ ಶಾಸಕರು ಉದ್ಘಾಟಿಸಲಿದ್ದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ, ಎಎಸ್ಪಿ ನಿಖಿಲ್ ಬುಳ್ಳಾವರ, ಸಿಡಿಪಿಒ ಸುಶೀಲಾ ಮೊಗೇರ ಭಾಗವಹಿಸಿಲಿದ್ದಾರೆ. ಈ ಸಂದರ್ಬದಲ್ಲಿ ಸಿಲೆಂಡರ ಬಳಕೆ, ಅನಾಹುತ ಸಂಭವಿಸಿದಾಗ ತೆಗೆದುಕೊಳ್ಳುವ ಮುಂಜಾಗ್ರತೆ ಕಾರ್ಯಕ್ರಮ, ಗ್ಯಾಸನ ಉಪಯೋಗಗಳು ಕುರಿತು ಪ್ರಾತ್ಯಕ್ಷಿತೆ ನೀಡಲಾಗುವದು ಎಂದು ಶಿವಾನಿ ಶಾಂತರಾಮ ತಿಳಿಸಿದ್ದಾರೆ.