ದುಬೈ, ಅ ೨೪: ತೀರ ಬಡತನವನ್ನು ಎದುರಿಸುತ್ತಿರುವ ಆರ್ಲಪದವಿನ ಸಹೋದರಿಯೋರ್ವಳು ಮೂತ್ರಪಿಂಡ ಖಾಯಿಲೆಯಿಂದ ಬಳಲುತ್ತಿದ್ದು ಇವರ ಕಿಡ್ನಿ ವಿನಿಮಯ ಹಾಗು ಚಿಕಿತ್ಸೆಗೆ ಆರ್ಥಿಕ ನೆರವು, ಹಾಗು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಸುಮಾರು ಒಂದು ವರ್ಷಗಳಿಂದ ಮಣಿಪಾಲದ ಕೆ. ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ತೀರಾ ಬಡತನ ದಿಂದ ಕಂಗಾಲಾಗಿರುವ ಉಡುಪಿ ಜಿಲ್ಲೆಯ ಇಂದ್ರಾಳಿ ನಿವಾಸಿಯಾದ ಇಂತಿಯಾಝ್ ಎಂಬವರ 2 ವರ್ಷದ " ಇಂಷಾ ಫಾತಿಮಾ " ಎಂಬ ಹೆಣ್ಣು ಮಗುವಿನ ಚಿಕಿತ್ಸೆಗಾಗಿ ಧನಸಹಾಯ, ಅದೇ ರೀತಿ ಮೂಳೂರು ಜಮಾಅತಿನ ಉಸ್ತಾದರಾದ " ಹೈದರ್ ಸಹಾನಿ ಇವರಿಗೆ ಮನೆ ಕಟ್ಟಲು ಧನ ಸಹಾಯ, ಮೂಳೂರಿನ ಸಹೋದರಿಯೊರ್ವರ ಮಗಳ ಮದುವೆಗೆ ಸಹಾಯ, ಹೀಗೆ ಹತ್ತು ಹಲವಾರು ಸಮುದಾಯದ ಬಡ ನಿರ್ಗತಿಕರಿಗೆ ಸಹಾಯ ಹಸ್ತವನ್ನು ನೀಡುವುದರೊಂದಿಗೆ ಸಮುದಾಯ ಹಾಗು ಸಮಾಜದ ಜನರ ಮನದಲ್ಲಿ " ಅಲ್ ಖಮರ್ ವೆಲ್ಪೇರ್ ಅಸೋಸಿಯೇಷನ್ ಮೂಳೂರು " ಮನೆ ಮಾಡಿರುವುದಕ್ಕೆ ಹೆಮ್ಮೆ ಪಡುತ್ತೇವೆ.
ಅಲ್ಲಾಹನು ಪ್ರತೀಯೊರ್ವರನ್ನು ಆರೋಗ್ಯವಂತರನ್ನಾಗಿಸಲಿ.ಮತ್ತು ಅಲ್ಲಾಹನ ಮೆಚ್ಚುಗೆಗೆ ಪಾತ್ರವಾಗಿರುವ ಇಂತಹ ಉತ್ತಮ ಕೆಲಸಗಳಿಗೆ ಸಹಕರಿಸಿದವರ ಎಲ್ಲಾ ಕಷ್ಟಗಳನ್ನು ದೂರ ಮಾಡಿ ಇನ್ನಷ್ಟು ಸಮುದಾಯದ ಏಳಿಗೆಗಾಗಿ ದುಡಿಯುವ ಮನಸ್ಸು ಅವರಿಗೆ ಅಲ್ಲಾಹನು ನೀಡಲಿ ಆಮೀನ್.
ವರದಿ : ಅಬ್ದುಲ್ ಲತೀಫ್ ಮೂಳೂರು