ದುಬೈ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅಧೀನ ಘಟಕವಾದ ಯೂತ್ ವಿಂಗ್ ಇದರ 7 ನೇ ವಾರ್ಷಿಕ ಮಹಾ ಸಭೆಯು ಎವರ್ ಫೈನ್ ಹೋಟೆಲ್ ಸಭಾಂಗಣ ದಲ್ಲಿ ಯೂತ್ ವಿಂಗ್ ಅಧ್ಯಕ್ಷರಾದ ಸೈಫುದ್ದೀನ್ ಪಟೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯು ಡಿ.ಕೆ.ಎಸ್.ಸಿ ಉಮ್ಮುಲ್ ಖುಯೈನ್ ಘಟಕದ ಅಧ್ಯಕ್ಷರಾದ ಶಾಫಿ ಸಖಾಫಿ ರವರ ದುವಾ ದೊಂದಿಗೆ ಪ್ರಾರಂಭ ಗೊಂಡು ಯೂತ್ ವಿಂಗ್ ನ ಕಮಲ್ ಅಜ್ಜಾವರ ರವರು ಸ್ವಾಗತಿಸಿ ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ಸಲಹೆಗಾರರಾದ ಹಾಜಿ.ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ ರವರು ಉದ್ಘಾಟಿಸಿದರು. ವಾರ್ಷಿಕ ವರದಿ ಹಾಗು ಲೆಕ್ಕಪತ್ರವನ್ನು ಝುಬೈರ್ ಆತೂರ್ ರವರು ಮಂಡಿಸಿದರು ಸಭೆಯಲ್ಲಿ ರಾಷ್ಟೀಯ ಸಮಿತಿಯ ಇ.ಕೆ.ಕಿನ್ಯ ರವರು ಚುನಾವಣಾದಿಕಾರಿಯಾಗಿ 2017-18 ರ ಸಾಲಿನ ನೂತನ ಸಮಿತಿಯನ್ನು ರಚಿಸಿದರು. ಉಸ್ತುವಾರಿಯಾಗಿ ಆಗಮಿಸಿದ ಹಾಜಿ.ಹಸನಬ್ಬ ಕೊಲ್ನಾಡು, ರಾಷ್ಟೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಣ್ಣಂಗಾರ್, ರಾಷ್ಟೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ನೂತನ ಸಮಿತಿಗೆ ಶುಭ ಹಾರೈಸುವುದರೊಂದಿಗೆ ಸೂಕ್ತ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ರಾಷ್ಟೀಯ ಸಮಿತಿಯ ಕಮರುದ್ದೀನ್ ಗುರುಪುರ ,ದೇರಾ ಯುನಿಟ್ ನ ನೂತನ ಪ್ರದಾನ ಕಾರ್ಯದರ್ಶಿ ಸಮದ್ ಬೀರಾಲಿ , ಅಜ್ಮಾನ್ ಯುನಿಟ್ ನ ನಜೀರ್ ಕಣ್ಣಂಗಾರ್ ರವರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಲೀಂ ಮುಡಬಿದ್ರೆ ಧನ್ಯವಾದ ಸಮರ್ಪಿಸಿದರು.
2017 - 18 ಸಾಲಿನ ಕಾರ್ಯಕಾರಿಣಿ ಸಮಿತಿ .
ಅಧ್ಯಕ್ಷರು : ಸೈಫುದ್ದೀನ್ ಪಟೇಲ್ ಅರಂತೋಡು
ಉಪಾಧ್ಯಕ್ಷರು : ರಿಯಾಜ್ಹ್ ಕಿನ್ಯ , ರಿಜ್ವಾನ್ ಮಡಂತಿಯಾರ್.
ಪ್ರಧಾನ ಕಾರ್ಯದರ್ಶಿ : ಝುಬೈರ್ ಆತೂರ್ .
ಜೊತೆ ಕಾರ್ಯದರ್ಶಿ : ಸಲೀಂ ಮೂಡಬಿದ್ರೆ , ಅರ್ಷದ್ ಅರ್ಕುಳ .
ಕೋಶಾಧಿಕಾರಿ : ಜಮಾಲ್ ಬಜ್ಪೆ .
ಸಂಚಾಲಕರು : ಕಮಾಲ್ ಅಜ್ಜಾವರ , ನಾಸಿರ್ ಆತೂರ್ , ಕಲಂದರ್ ಚಿಕ್ಕಮಂಗಳೂರು , ಅಬ್ರಾಜ್ಹ್ ಮಂಜೇಶ್ವರ ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.