ದುಬೈ:ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ದೇರಾ ಘಟಕಕ್ಕೆ ನೂತನ ಸಾರಥ್ಯ
ದುಬೈ . ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅಧೀನ ಘಟಕವಾದ ದೇರಾ ಇದರ 18 ನೇ ವಾರ್ಷಿಕ ಮಹಾ ಸಭೆಯು ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವ ಹಾಗೂ ಗೌರವಾಧ್ಯಕ್ಷರಾದ ಜನಾಬ್.ಎಂ.ಇ.ಮೂಳೂರು ರವರ ಉಪಸ್ಥಿತಿಯಲ್ಲಿ ಯುನಿಟ್ ಅಧ್ಯಕ್ಷರಾಗಿದ್ದ ಜನಾಬ್.ಇಬ್ರಾಹಿಂ ಹಾಜಿ ಕಿನ್ಯ ರವರ ಅನುಪಸ್ಥಿತಿಯಲ್ಲಿ ಯುನಿಟ್ ಉಪಾಧ್ಯಕ್ಷರಾದ ಜನಾಬ್. ಇಸ್ಮಾಯಿಲ್ ಬಾರೂದ್ ರವರ ಅಧ್ಯಕ್ಷತೆಯಲ್ಲಿ ಜನಾಬ್. ಹಾಜಿ.ಎಂ.ಇ.ಮೂಳೂರು ರವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮವು ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ದುವಾ ದೊಂದಿಗೆ ಪ್ರಾರಂಭ ಗೊಂಡು ಯುನಿಟ್ ಪ್ರಧಾನ ಕಾರ್ಯದರ್ಶಿ ಜನಾಬ್.ಎಸ್.ಯೂಸುಫ್ ಅರ್ಲಪದವು ರವರು ಸ್ವಾಗತಿಸಿ ಜನಾಬ್.ಅಶ್ರಫ್ ಅಡ್ಯಾರ್ ರವರು ಸಭೆಯನ್ನು ಉದ್ಘಾಟಿಸಿದರು. ಜೊತೆ ಕಾರ್ಯದರ್ಶಿ ಜನಾಬ್.ರಪೀಕ್ ಸಂಪ್ಯ ರವರು ವಾರ್ಷಿಕ ವರದಿಯನ್ನು ಹಾಗೂ ಕೋಶಾಧಿಕಾರಿ ಹಂಝ ಮೂಳೂರು ರವರು ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ ಹಾಗೂ ಗೌರವಾಧ್ಯಕ್ಷರಾದ ಜನಾಬ್. ಎಂ.ಇ. ಮೂಳೂರು ರವರು ಯುನಿಟ್ ನ ಕಾರ್ಯವೈಖರಿಯ ಬಗ್ಗೆ ಹಾಗೂ ಡಿ.ಕೆ.ಎಸ್.ಸಿ ಯಬಗ್ಗೆ ಪ್ರಸ್ತಾವಿಕ ಭಾಷಣ ಮಾಡಿದರು. ಸಭೆಯಲ್ಲಿ ಯುನಿಟ್ ಉಸ್ತುವಾರಿಯಾಗಿ ಆಗಮಿಸಿದ ಜನಾಬ್. ಅಬ್ದುಲ್ ರಹಿಮಾನ್ ಸಜಿಪ ರವರು ಚುನಾವಣಾದಿಕಾರಿಯಾಗಿ 2017-18 ರ ಸಾಲಿನ ನೂತನ ಸಮಿತಿಯನ್ನು ರಚಿಸಿದರು ವೇದಿಕೆಯಲ್ಲಿ ಅತಿಥಿಗಳಾಗಿ ಡಿ.ಕೆ.ಎಸ್.ಸಿ. ಯು.ಎ.ಇ. ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್.ಇಕ್ಬಾಲ್ ಕಣ್ಣಂಗಾರ್ ಉಪಾದ್ಯಕ್ಷರಾದ ಜನಾಬ್.ಹಾಜಿ.ಹಸನಬ್ಬ ಕೊಲ್ನಾಡು, ಯುನಿಟ್ ಉಸ್ತುವಾರಿ ಯಾಗಿ ಆಗಮಿಸಿದ ಜನಾಬ್.ಶಾಫಿ ಸಖಾಫಿ ಕರಿಂಬಿಲ ರವರು ನೂತನ ಕಮಿಟಿ ಗೆ ಶುಭ ಹಾರೈಸಿದರು. ಸಭೆಯಲ್ಲಿ ಯುನಿಟ್ ಉಸ್ತುವಾರಿಗಳಾದ ಜನಾಬ್. ಹಾಜಿ.ಅಬ್ದುಲ್ ಖಾದರ್ ಎಸ್.ಕೆ. ಉಚ್ಚಿಲ, ಜನಾಬ್.ಬದ್ರುದ್ದೀನ್ ಅರಂತೋಡು, ಜನಾಬ್.ಹಾಜಿ.ನವಾಜ್ ಕೋಟೆಕ್ಕಾರ್, ಅಲ್ ಕಮರ್ ಎಸೋಷಿಯೇಷನ್ ಇದರ ಅಧ್ಯಕ್ಷರಾದ ಜನಾಬ್.ಸಮದ್ ಉಚ್ಚಿಲ, ರಾಷ್ಟೀಯ ಸಮಿತಿ ನಾಯಕರಾದ ಜನಾಬ್.ಅಬ್ದುಲ್ಲಾ ಮುಸ್ಲಿಯಾರ್ , ಜನಾಬ್.ಹಾಜಿ ಅಬ್ದುಲ್ಲ ಬೀಜಾಡಿ, ಜನಾಬ್.ಅಬ್ಬಾಸ್ ಪಾಣಾಜೆ, ಜನಾಬ್.ಕಮಲ್ ಅಜ್ಜಾವರ, ಅಶ್ರಫ್ ಕಾನ, ಜೆದ್ದಾಪ್ ಯುನಿಟ್ ಅಧ್ಯಕ್ಷರಾಗಿ ಜನಾಬ್.ಅಶ್ರಫ್ ಉಳ್ಳಾಲ್, ಜನಾಬ್. ಕೋಯಾಕ ಬೆಂಗ್ರೆ ಜೆದ್ದಾಪ್, ಜನಾಬ್.ಹಮೀದ್ ಮುಸ್ಲಿಯಾರ್ ನೀರ್ಕಜೆ ಮುಂತಾದವರು ರವರು ಉಪಸ್ಥಿತರಿದ್ದರು. ಜನಾಬ್.ಹಬೀಬ್ ಈಶ್ವರಮಂಗಿಲ ಧನ್ಯವಾದ ದೊಂದಿಗೆ ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವದಲ್ಲಿ ಜಲಾಲಿಯ ಮಜ್ಲಿಸ್ ನಡೆಯಿತು.
2017 - 18 ರ ಸಾಲಿನ ನೂತನ ಸಮಿತಿ
ಗೌರವಾಧ್ಯಕ್ಷರು: ಜನಾಬ್. ಹಾಜಿ. ಎಂ.ಇ.ಮುಳೂರು
ಸಲಹೆಗಾರರು : ಜನಾಬ್.ಅಶ್ರಫ್ ಅಡ್ಯಾರ್, ಜನಾಬ್. ಇಬ್ರಾಹಿಂ ಹಾಜಿ ಕಿನ್ಯ, ಜನಾಬ್.ಅಬ್ದುಲ್ಲಾ ಮುಸ್ಲಿಯಾರ್
ಅಧ್ಯಕ್ಷರು: ಜನಾಬ್.ಇಸ್ಮಾಯಿಲ್ ಬಾರೂದ್
ಉಪಾಧ್ಯಕ್ಷರು: ಜನಾಬ್.ಎಸ್.ಯೂಸುಫ್ ಅರ್ಲಪದವು, ಜನಾಬ್.ಹಂಝ ಮೂಳೂರು,ಜನಾಬ್.ಅಬ್ದುಲ್ ರಜಾಕ್ ಮುಟ್ಟಿಕಲ್
ಪ್ರಧಾನ ಕಾರ್ಯದರ್ಶಿ: ಜನಾಬ್: ಸಮದ್ ಬೀರಾಲಿ
ಜೊತೆ ಕಾರ್ಯದರ್ಶಿ: ಜನಾಬ್: ರಪೀಕ್ ಸಂಪ್ಯ, ಜನಾಬ್.ಹಬೀಬ್ ಈಶ್ವರಮಂಗಿಲ, ಜನಾಬ್.ಅಕ್ಬರ್ ಅಲಿ ಸುರತ್ಕಲ್
ಕೋಶಾದಿಕಾರಿ : ಜನಾಬ್.ಶಕೂರು ಮಣಿಲ
ಲೆಕ್ಕ ಪರಿದೋಶಕರು: ಜನಾಬ್. ಅಬ್ದುಲ್ ಹಮೀದ್ ಮುಹಮ್ಮದ್ ಮುಳೂರು ತೋಟ
ಸಂಚಾಲಕರು: ಜನಾಬ್: ಮುಹಮ್ಮದ್ ಹಾಜಿ ಮುರ ಪುತ್ತೂರು, ಜನಾಬ್.ಸಿದ್ದೀಕ್ ಹಾಜಿ, ಜನಾಬ್.ಉಸ್ಮಾನ್ ಮೂಳೂರು, ಜನಾಬ್.ಎಸ್.ಇಬ್ರಾಹಿಂ ಶರೀಪ್ ಅರ್ಲಪದವು , ಜನಾಬ್. ಶರೀಪ್ ಬೋಳ್ಮಾರ್
ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.