ಸಿದ್ದಾಪುರದಲ್ಲಿ ಡಬಲ್ ಮರ್ಡರ್. ಹೆತ್ತ ತಾಯಿ ಮತ್ತು ಸಹೋದರಿಗೆ ಗುಂಡಿಟ್ಟ ಮಗ.

Source: SO News | By Laxmi Tanaya | Published on 14th October 2021, 11:18 PM | Coastal News |

ಸಿದ್ದಾಪುರ : ಪುತ್ರ ಮಹಾಶಯನೋರ್ವ ತನ್ನ ತಾಯಿ ಮತ್ತು ತಂಗಿಯನ್ನ ಕೊಲೆಗೈದ ಹೃದಯವಿದ್ರಾವಕಾರಿ ಘಟನೆ ತಾಲೂಕಿನ ಕುಡಗೋಡು ಬಳಿ ನಡೆದಿದೆ.

ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು,  ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು  ರಮ್ಯಾ ನಾರಾಯಣ ಹಸ್ಲರ್ (19) ಮೃತ ದುರ್ದೈವಿಗಳು. ಮಂಜುನಾಥ ಹಸ್ಲರ್ (24)ಕೊಲೆ ಆರೋಪಿಯಾಗಿದ್ದಾನೆ

ಆರೋಪಿ ಮುಂಜುನಾಥ  ಕೆಲಸಕ್ಕೆ ಸರಿಯಾಗಿ ಹೋಗದೆ ಶೋಕಿ ಮಾಡಿಕೊಂಡು ತಿರುಗಾಡುತ್ತಾ ಬಂದಿದ್ದ. ಮದ್ಯ ಸೇವನೆ ಮಾಡುತ್ತಿದ್ದ ಈತ  ನಾಡ ಬಂದೂಕನ್ನು ಮನೆಯಲ್ಲಿಟ್ಟುಕೊಂಡು ಶಿಕಾರಿ ಮಾಡುತ್ತಿದ್ದ ಎನ್ನಲಾಗಿದೆ. ಹಣಕ್ಕಾಗಿ ತನ್ನ ತಾಯಿ ಪಾರ್ವತಿಯನ್ನು ಪೀಡಿಸುತ್ತಾ ಇರುತ್ತಿದ್ದನು. ಅಲ್ಲದೇ ಅಡುಗೆ ಸರಿಯಾಗಿ ಮಾಡುವುದಿಲ್ಲಾ ಅಂತಾ ಅವಳೊಂದಿಗೆ ಜಗಳ ಮಾಡುತ್ತಿದ್ದ.  ತಂಗಿ ರಮ್ಯಾಳ‌ ಶಿಕ್ಷಣಕ್ಕಾಗಿ  ತಾಯಿ ಸಂಘದಲ್ಲಿ ಸಾಲ ಮಾಡಿ  ಕೊಡಿಸುವ ವಿಚಾರದಲ್ಲಿ ತಗಾದೆ ತೆಗೆದಿದ್ದ. 

ಬುಧವಾರ ಕೂಡ ಶಿಖಾರಿಗೆ ಹೋದಾತ ಖಾಲಿ ಬಂದು ಮನೆಯಲ್ಲಿ ಸಾಂಬಾರ ಸರಿಯಿಲ್ಲ ಎಂದು ಜಗಳ ಮಾಡಿದ್ದ. ಅಲ್ಲದೇ ನಾಡಬಂಧೂಕಿನಿಂದ ತಾಯಿಗೆ ಗುಂಡಿಟ್ಟ. ಅದನ್ನ ತಪ್ಪಿಸಲು ಹೋದ ತಂಗಿಯ ಪ್ರಾಣಪಕ್ಷಿ ಕೂಡ ಹಾರಿ ಹೋಗಿದೆ.

  ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...