ಸಿದ್ದಾಪುರ : ಪುತ್ರ ಮಹಾಶಯನೋರ್ವ ತನ್ನ ತಾಯಿ ಮತ್ತು ತಂಗಿಯನ್ನ ಕೊಲೆಗೈದ ಹೃದಯವಿದ್ರಾವಕಾರಿ ಘಟನೆ ತಾಲೂಕಿನ ಕುಡಗೋಡು ಬಳಿ ನಡೆದಿದೆ.
ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು ರಮ್ಯಾ ನಾರಾಯಣ ಹಸ್ಲರ್ (19) ಮೃತ ದುರ್ದೈವಿಗಳು. ಮಂಜುನಾಥ ಹಸ್ಲರ್ (24)ಕೊಲೆ ಆರೋಪಿಯಾಗಿದ್ದಾನೆ
ಆರೋಪಿ ಮುಂಜುನಾಥ ಕೆಲಸಕ್ಕೆ ಸರಿಯಾಗಿ ಹೋಗದೆ ಶೋಕಿ ಮಾಡಿಕೊಂಡು ತಿರುಗಾಡುತ್ತಾ ಬಂದಿದ್ದ. ಮದ್ಯ ಸೇವನೆ ಮಾಡುತ್ತಿದ್ದ ಈತ ನಾಡ ಬಂದೂಕನ್ನು ಮನೆಯಲ್ಲಿಟ್ಟುಕೊಂಡು ಶಿಕಾರಿ ಮಾಡುತ್ತಿದ್ದ ಎನ್ನಲಾಗಿದೆ. ಹಣಕ್ಕಾಗಿ ತನ್ನ ತಾಯಿ ಪಾರ್ವತಿಯನ್ನು ಪೀಡಿಸುತ್ತಾ ಇರುತ್ತಿದ್ದನು. ಅಲ್ಲದೇ ಅಡುಗೆ ಸರಿಯಾಗಿ ಮಾಡುವುದಿಲ್ಲಾ ಅಂತಾ ಅವಳೊಂದಿಗೆ ಜಗಳ ಮಾಡುತ್ತಿದ್ದ. ತಂಗಿ ರಮ್ಯಾಳ ಶಿಕ್ಷಣಕ್ಕಾಗಿ ತಾಯಿ ಸಂಘದಲ್ಲಿ ಸಾಲ ಮಾಡಿ ಕೊಡಿಸುವ ವಿಚಾರದಲ್ಲಿ ತಗಾದೆ ತೆಗೆದಿದ್ದ.
ಬುಧವಾರ ಕೂಡ ಶಿಖಾರಿಗೆ ಹೋದಾತ ಖಾಲಿ ಬಂದು ಮನೆಯಲ್ಲಿ ಸಾಂಬಾರ ಸರಿಯಿಲ್ಲ ಎಂದು ಜಗಳ ಮಾಡಿದ್ದ. ಅಲ್ಲದೇ ನಾಡಬಂಧೂಕಿನಿಂದ ತಾಯಿಗೆ ಗುಂಡಿಟ್ಟ. ಅದನ್ನ ತಪ್ಪಿಸಲು ಹೋದ ತಂಗಿಯ ಪ್ರಾಣಪಕ್ಷಿ ಕೂಡ ಹಾರಿ ಹೋಗಿದೆ.
ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.