ಶೋಪಿಯಾನ ಎನ್ಕೌಂಟರ್ ನಲ್ಲಿ ಹತ್ಯೆಯಾದವರು ಉಗ್ರರಲ್ಲ ಕಾರ್ಮಿಕರು; ಡಿ.ಎನ್.ಎ ವರದಿಯಲ್ಲಿ ಬಹಿರಂಗ

Source: sonews | By Staff Correspondent | Published on 25th September 2020, 7:01 PM | National News |

ಶ್ರೀನಗರ್: ಜುಲೈ ತಿಂಗಳಲ್ಲಿ ಜಮ್ಮು ಕಾಶ್ಮೀರದ ಶೋಪಿಯನ್ ಜಿಲ್ಲೆಯಲ್ಲಿ ನಡೆದಿತ್ತೆನ್ನಲಾದ ಎನ್‍ಕೌಂಟರ್‍ ನಲ್ಲಿ ಹತರಾಗಿದ್ದಾರೆಂದು ತಿಳಿಯಲಾಗಿದ್ದ ಮೂವರು ಶಂಕಿತ ಉಗ್ರರು ವಾಸ್ತವವಾಗಿ ಉಗ್ರರಾಗಿರಲಿಲ್ಲ ಬದಲು ರಜೌರಿಯ ಕಾರ್ಮಿಕರಾಗಿದ್ದರು ಎಂದು ಡಿಎನ್‍ಎ ಪರೀಕ್ಷೆಯಿಂದ ತಿಳಿದು ಬಂದಿದೆ.

ಈ ಎನ್‍ಕೌಂಟರ್‍ ನಲ್ಲಿ ಮೃತಪಟ್ಟಿದ್ದ ಅಬ್ರಾರ್ (20), ಇಮ್ತಿಯಾಝ್, ಇಬ್ರಾರ್ ಅಹ್ಮದ್ (17) ಸೋದರ ಸಂಬಂಧಿಗಳಾಗಿದ್ದರು ಹಾಗೂ ಕಾಮಿರ್ಕರಾಗಿದ್ದರು ಎಂದು ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೇನೆ ನಡೆಸಿದ ಕೋರ್ಟ್ ಆಫ್ ಎಂಕ್ವೈರಿಯಲ್ಲಿ ಈ ಎನ್‍ಕೌಂಟರ್ ನಲ್ಲಿ ಶಾಮೀಲಾಗಿದ್ದ ಸೈನಿಕರನ್ನು ತಪ್ಪಿತಸ್ಥರೆಂದು ಗುರುತಿಸಲಾಗಿದ್ದು ಅವರ ವಿರುದ್ಧ ಸೇನಾ ಕಾಯಿದೆಯಂತೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೇನಾ ಪಡೆಗಳ ವಿಶೇಷಾಧಿಕಾರ ಕಾಯಿದೆಯಿಂದ ಪ್ರದತ್ತವಾದ ಅಧಿಕಾರವನ್ನು ಬಳಸಿ ಹಾಗೂ ಕೆಲವೊಂದು ನಿಯಮಾವಳಿಗಳನ್ನು ಈ ಸೈನಿಕರು ಉಲ್ಲಂಘಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ಈ ಎನ್‍ಕೌಂಟರ್ ನ ಚಿತ್ರಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...