ಜ.24 ಹಾಗೂ 25 ಕರ್ನಾಟಕ ದಲಿತ ಸಂಘರ್ಷ ಸಮಿತಿ ಯ ಜಿಲ್ಲಾಮಟ್ಟದ ಅಧ್ಯಯನ ಶಿಬಿರ
ಮುಂಡಗೋಡ : ಕರ್ನಾಟಕ ದಲಿತ ಸಂಘರ್ಷ ಸಮಿತಿ ಯ ಜಿಲ್ಲಾ, ತಾಲೂಕ ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳ ಜಿಲ್ಲಾಮಟ್ಟದ ಅಧ್ಯಯನ ಶಿಬಿರ ಜನೇವರಿ 24 ಹಾಗೂ 25 ರಂದು ಪಟ್ಟಣದ ಟೌನ್ಹಾಲ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಮಾತೆ ಬಸವೇಶ್ವರಿ ಬಸವಧಾಮ ಅತ್ತಿವೇರಿ ಮುಂಡಗೋಡ ವಹಿಸಲಿದ್ದಾರೆ.
ಉದ್ಘಾಟನೆ ಶಾಸಕ ಶಿವರಾಮ ಹೆಬ್ಬಾರ ನೇರವೇರಿಸಲಿದ್ದಾರೆ, ಬುದ್ದ, ಬಸವ, ಅಂಬೇಡ್ಕರ್ ಜಗಜೀವನರಾಮ್ ಭಾವಚಿತ್ರಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪುಷ್ಪಾರ್ಚನೆ ಮಾಡಲಿದ್ದಾರೆ.ಡಿಎಸ್ಎಸ್ ಧ್ವಜಾರೋಹಣವನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿಎಸ್ಎಸ್ ಜಿಲ್ಲಾ ಸಂಚಾಲಕ ಎಸ್.ಫಕ್ಕಿರಪ್ಪ ವಹಿಸಲಿದ್ದಾರೆ.
ಮುಖ್ಯಅತಿಥಿಗಳಾಗಿ ಹೆಣ್ಣೂರ ಶ್ರೀನಿವಾಸ್, ಭೀಮಣ್ಣ ನಾಯಕ್, ರವಿಗೌಡ ಪಾಟೀಲ, ಕೃಷ್ಣ ಹಿರಳ್ಳಿ, ಲಕ್ಷ್ಮಣ ಬನಸೋಡೆ ಮುಂತಾದವರು ಆಗಮಿಸಲಿದ್ದಾರೆ.
ಎರಡುದಿನ ನಡೆಯುವ ಶಿಬಿರದಲ್ಲಿ ಪ್ರತಿದಿನ 4 ವಿಚಾರಗೋಷ್ಠಿ ನಡೆಯಲಿದೆ ಎಂದು ಉತ್ತರಕನ್ನಡ ಜಿಲ್ಲಾ ಡಿಎಸ್ಎಸ್ ಸಂಚಾಲಕ ಎಸ್.ಫಕ್ಕಿರಪ್ಪ ತಿಳಿಸಿದ್ದಾರೆ.