ಭಟ್ಕಳ ಯುತ್ ಕಾಂಗ್ರೆಸ್‍ನಿಂದ ಸ್ನೇಹವಿಶೇಷ ಶಾಲೆಗೆ ಆಹಾರಕಿಟ್ ವಿತರಣೆ

Source: so news | By MV Bhatkal | Published on 20th June 2021, 12:29 PM | Coastal News |


ಭಟ್ಕಳ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಇಲ್ಲಿನ ಯುತ್ ಕಾಂಗ್ರೆಸ್ ವತಿಯಿಂದ ಕೋಕ್ತಿನಗರದಲ್ಲಿರುವ ಸ್ನೇಹ ವಿಶೇಷ ಶಾಲೆಗೆ ಆಹಾರದ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ,ರಾಹುಲ್ ಗಾಂಧಿಯವರು ಭಾರತದ ಭವಿಷ್ಯದ ಪ್ರಧಾನಿಯಾಗಲಿದ್ದಾರೆ. ಅವರ ಜನ್ಮದಿನದಂದು ಯುತ್ ಕಾಂಗ್ರೆಸ್‍ನಿಂದ  ಸ್ನೇಹ ಶಾಲೆಯ ಮಕ್ಕಳಿಗೆ ಅನುಕೂಲವಾಗುವಂತೆ ಆಹಾರ ಕಿಟ್ ವಿತರಿಸಿರುವುದು ಶ್ಲಾಘನೀಯ ಎಂದರು.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ, ಹಿರಿಯ ಮುಖಂಡ ಟಿ ಡಿ ನಾಯ್ಕ, ಜಿಲ್ಲಾ ಯುತ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಲಕ್ಷ್ಮಣ ನಾಯ್ಕ ಅಳ್ವೆಕೋಡಿ,ಯುತ್ ಕಾಂಗ್ರೆಸ್ ಮುಖಂಡರಾದ ದುರ್ಗದಾಸ ಮೊಗೇರ,ದಯಾನಂದ ಶಿರಾಲಿ,ಸಂತೋಷ ನಾಯ್ಕ ಅಳ್ವೆಕೋಡಿ, ವೆಂಕಟೇಶ ನಾಯ್ಕ,ಮಣಿಕಂಠ ನಾಯ್ಕ ಮುಂತಾದವರಿದ್ದರು.

Read These Next