ನಾಗಯಕ್ಷೆ ದೇವಸ್ಥಾನ ವತಿಯಿಂದ ತಂಪು ಪಾನಿಯಾ ವಿತರಣೆ

Source: sonews | By Staff Correspondent | Published on 26th March 2020, 6:59 PM | Coastal News | Don't Miss |

ಭಟ್ಕಳ: ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲೂ ತಮ್ಮ ಮನೆಯ ಕುಟುಂಬದವರಿಂದ ದೂರವಿದ್ದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬೀಸಿಲಿನಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತೆ, ಪೊಲೀಸ್ ಸಿಬ್ಬಂದಿ, ತಹಸೀಲ್ದಾರ ಕಚೇರಿ ಸಿಬ್ಬಂದಿ ಸೇರಿದಂತೆ ಇತರರ ಕಾರ್ಯ ಶ್ಲಾಘನೀಯ ಎಂದು ಕೃಷ್ಣಾನಂದ ರಾಮದಾಸ ಪ್ರಭು ಹೇಳಿದರು.

ಅವರು ಗುರುವಾರ ಭಟ್ಕಳದ ಶ್ರೀ ನಾಗಯಕ್ಷೇ ದೇವಸ್ಥಾನದ ವತಿಯಿಂದ ಆರೋಗ್ಯ ಕಾರ್ಯಕರ್ತೆ, ಪೊಲೀಸ್ ಸಿಬ್ಬಂದಿ, ತಹಸೀಲ್ದಾರ ಕಚೇರಿ ಸಿಬ್ಬಂದಿ ಸೇರಿದಂತೆ ಇತರರಿಗೆ ತಂಪು ಪಾನೀಯ ವಿತರಿಸಿ ಮಾತನಾಡಿದರು. ಹಗಲು ಇರುಳನ್ನದೆ ಮನೆಯಿಂದ ಹೊರಗಿದ್ದು ಅಪಾಯವನ್ನು ಎದುರಿಸಿ ನಮಗೆ ರಕ್ಷಣೆ ನೀಡುತ್ತಿರುವವರಿಗೆ ನಾವು ಎನು ಮಾಡಿದರು ಕಡಿಮೆ ಎಂದು ಹೇಳದರು. ಈ ಸಂದರ್ಬದಲ್ಲಿ ರಾಮನಾಥ ಭಟ್ ಇವರೊಂದಿಗೆ ಸೇರಿ ಭಟ್ಕಳ ತಾಲೂಕಿನ ಗಡಿಭಾಗವಾದ ಶಿರೂರಿನಿಂದ ಶಿರಾಲಿಯವರೆಗೆ ಕಾವಲು ಕಾಯುತ್ತಿರುವ ಪೊಲೀಸರು, ಆಶಾಕಾರ್ಯಕರ್ತೇಯರು, ಸರ್ಕಾರಿ ಕಚೇರಿ ಸಿಬ್ಬಂದಿ ಸೇರಿದಂತೆ ರಸ್ತೆಯಲ್ಲಿ ಸಿಕ್ಕ ಎಲ್ಲರಿಗೂ ತಂಪು ಪಾನೀಯ ವಿತರಿಸಿದರು.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...