ಕಾರವಾರ: ರೋಟರಿ ಕ್ಲಬ್ ಕಾರವಾರವತಿಯಿಂದ ಕಾರವಾರದ ಬಡ ವರ್ಗದ ಮಹಿಳೆಯರಿಗೆ ಅವರಿಗೆ ಅವಶ್ಯ ಇವರು ಕೆಲವು ಬಟ್ಟೆಗಳನ್ನು ವಿತರಿಸಿದರು.
ಪ್ರಾರಂಭದಲ್ಲಿ ರೋಟರಿ ಅಧ್ಯಕ್ಷ ರೋ. ನರೇಂದ್ರ ದೇಸಾಯಿ ಎಲ್ಲರನ್ನೂ ಸ್ವಾಗತಿಸುತ್ತ ರೋಟರಿ ಪ್ರಸ್ತುತ ವರ್ಷದಲ್ಲಿ “ಗರೀಬ ಕಲ್ಯಾಣ ಯೋಜನೆ” ಯನ್ನು ಪ್ರಾರಂಭಸಿದದ್ದು ಅದರಲ್ಲಿ ಬಡ ಕುಟುಂಬದವರಿಗೆ ಸಹಾಯವಾಗುವ ಹಾಗೂ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಪೂರೈಸುವ ಯೋಜನೆಯನ್ನು ಹಮ್ಮಿಕೊಂಡಿರುತ್ತೇವೆ. ಈಗಾಗಲೇ ಕೆಲ ಜನರಿಗೆ ಆಹಾರ ಕಿಟ್ ವಿತರಿಸಿದ್ದೇವೆ. ಮುಂದೆಯೂ ಅನೇಕ ಕಾರ್ಯಕ್ರಮಗಳನ್ನು ಮಾಡಲಿದ್ದೇವೆ” ಎಂದರು.
ಕಾರ್ಯಕ್ರಮದಲ್ಲಿ ಸದಸ್ಯರಾದ ರೋ. ಮಿನಿನ ಪುಡ್ತಾಡೊ, ರೋ. ಎಲ್.ಎಸ್.ಫರ್ನಾಂಡಿಸ್, ರೋ.ಮಾರುತಿ ಕಾಮತ, ರೋ.ಸುರಜ ಗಾಂವಕರ, ರೋ. ನಾಗರಾಜ ಜೋಶಿ, ರೋ. ಅನಮೋಲ ರೇವಣಕರ ಹಾಗೂ ಇನ್ನರ್ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ನೇಹಾ ದೇಸಾಯಿ, ಶ್ರೀಮತಿ ಭಾರತಿ ಸೈಲ್ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಕಾರ್ಯದರ್ಶಿ ರೋ. ಮೋಹನ ನಾಯ್ಕ ಎಲ್ಲರನ್ನು ಅಭಿನಂದಿಸದರು, ಕಾರ್ಯಕ್ರಮವನ್ನು ಯೋಗೇಶ ಭಂಡಾರಕರ ನಡೆಸಿಕೊಟ್ಟರು.