ಧಾರವಾಡ: ಧಾರವಾಡ ರಾಣಿಚನ್ನಮ್ಮನಗರ ಹತ್ತಿರ ಶ್ರೀಪಾದನಗರ ನಿವಾಸಿ ರೇಣುಕಾ ಕೋಂ. ಮಹೇಶ ಮಾಳನಾಯ್ಕ(22 ವರ್ಷ) ಇವರು ಜುಲೈ.23 ರಂದು ಮುಂಜಾನೆ 11-30 ಗಂಟೆಗೆ ಕಿರಾಣಿ ತೆಗೆದುಕೊಂಡು ಬರಲು ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ ಎಂದು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯು 5 ಅಡಿ-2 ಇಂಚು ಎತ್ತರ, ಮೈಯಿಂದ ಸದೃಡ, ಗೋಧಿ ಮೈಬಣ್ಣ, ದುಂಡು ಮುಖ, ಮಹಿಳೆ ಕಾಣೆಯಾದಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಕನ್ನಡ, ಹಿಂದಿ, ಭಾಷೆ ಮಾತನಾಡುತ್ತಾರೆ.
ಈ ಚಹರೆವುಳ್ಳ ಮಹಿಳೆ ಲಭ್ಯವಾದಲ್ಲಿ ತಕ್ಷಣ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಂಟ್ರೋಲ್ ರೂಂ.0836-2233555/100, ಉಪನಗರ ಪೊಲೀಸ ಠಾಣೆ ಧಾರವಾಡ–0836-2233511/ 9480802033, ಅಥವಾ ಪಾಲಕರ ಮೊಬೈಲ್ ಸಂಖ್ಯೆ 9980381878 ಗೆ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.