ಕಾರವಾರ : ಉತ್ತರಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆ
ಕೋವಿಡ್ ಸಂದರ್ಭದಲ್ಲಿ ತುಂಬಾ ಚೆನ್ನಾಗಿ ಕಾರ್ಯ ನಿರ್ವಹಸಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಒ್ರವೀಣ ಸೂದ್ ಹೇಳಿದ್ದಾರೆ
ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅವರು ಮಾತನಾಡಿದರು. ಕೋವಿಡ್ ನಿಂದ ಕಾರವಾರ ಜಿಲ್ಲೆಯಲ್ಲಿ ಯಾವುದೇ ಪೊಲೀಸರು ಸಾವನ್ನಪ್ಪಿಲ್ಲ. ಇದಕ್ಕೆ ಕಾರ್ಯನಿರ್ವಹಿಸಿದ ರೀತಿ ಚೆನ್ನಾಗಿದೆ.
ಕಾರವಾರದಲ್ಲಿ ಎಸ್ಪಿ ಅವರ ಅಧ್ಯಕ್ಷತೆಯಲ್ಲಿ ಒಳ್ಳೆ ನಿರ್ವಹಣೆಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಏಪ್ರಿಲ್ ವರೆಗೆ ಬಹುತೇಕ ಹುದ್ದೆ ಭರ್ತಿಯಾಗಲಿದೆ. ಆರು ತಿಂಗಳ ನಂತರ ಶಸಸ್ತ್ರ ಪೊಲೀಸ್ ಕೂಡ ಭರ್ತಿಯಾಗಲಿದೆ ಎಂದರು.
ಉತ್ತರಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ಪ್ರಕರಣ ಕೂಡ ಹೆಚ್ವಿನ ಸಂಖ್ಯೆಯಲ್ಲಿ ಪತ್ತೆ ಹಚ್ಚಲಾಗಿದೆ. ಎನ್ಐಎ ಮತ್ತು ಪೊಲೀಸ್ ಐಬಿ, ಸಿಬಿಐ ಎಲ್ಲಾ ಒಂದೇ. ಪರಸ್ಪರ ಮಾಹಿತಿ ಹಂಚಿಕೆಯಿಂದ ಕೆಲಸ ಆಗುತ್ತಿದೆ ಎಂದು ಹೇಳಿದರು
ಪೊಲೀಸ್ ಇಲಾಖೆಯಲ್ಲಿ ಭಡ್ತಿಗೆ ಅರ್ಹರಾಗಿದ್ದರೆ ಕೂಡಲೇ ಕ್ರಮ ವಹಿಸಲಾಗುತ್ತದೆ. ಕಾನಸ್ಟೆಬಲ್, ಎಎಸ್ಐ ಯಾರೆ ಇದ್ರೂ ಇದಕ್ಕೆ ಅರಗಹರಾಗಿದ್ದರೆ ಐಜಿಪಿ ಅವರೇ ಕೈಯಲ್ಲಿ ಪ್ರಮೋಶನ್ ನೀಡ್ತಾರೆ.
ಬರುವ ಮಾರ್ಚಲ್ಲಿ ತುಂಬಾ ಜನ ಪ್ರಮೋಶನ್ಗೆ ಅರ್ಹರಾಗಲಿದ್ದಾರೆ ಎಂದು ಮಾಹಿತಿ ನೀಡಿದರು.