ಕುಮಟಾ: ಐಗಳ ಕುರ್ವೆ, ಗಂಗಾವಳಿ, ಹೆಬ್ಬೈಲ್ ಸೇತುವೆ ಪೂರ್ಣ ಗೊಳಿಸುವಂತೆ ಆಗ್ರಹ

Source: SO News | By Laxmi Tanaya | Published on 5th July 2022, 9:58 PM | Coastal News | Don't Miss |

ಕುಮಟಾ : ತಾಲೂಕಿನ ಐಗಳ ಕುರ್ವೆ, ಗಂಗಾವಳಿ, ಹೆಬ್ಬೈಲ್ ಸೇತುವೆ ಕಾಮಗಾರಿ ಯನ್ನು ಶೀಘ್ರ ವಾಗಿ ಪೂರ್ಣ ಗೊಳಿಸುವಂತೆ ಕುಮಟಾ ಲೋಕಶಕ್ತಿ ಘಟಕ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.

 ಇಲ್ಲಿನ ಐಗಳ ಕುರ್ವೆ, ಗಂಗಾವಳಿ, ಹೆಬ್ಬೈಲ್ ಗ್ರಾಮೀಣ ಪ್ರದೇಶಗಳು ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಸರಿಯಾದ ರಸ್ತೆ ಸಂಪರ್ಕ ವ್ಯವಸ್ಥೆ ಇಲ್ಲದೇ ಇನ್ನೂ ಕುಗ್ರಾಮ ಗಳಾಗಿಯೇ ಉಳಿದಿವೆ.  ಈ ಗ್ರಾಮಗಳ ಜನರಿಗೆ  ಸುಲಭ ಸಂಪರ್ಕ ಸೌಲಭ್ಯ ಕ್ಕಾಗಿ ಕಳೆದ ಕೆಲವು ವರ್ಷ ಗಳಿಂದ ಮಂಜೂರಾಗಿ ಶಂಕು ಸ್ಥಾಪನೆ ಕಂಡು ಆರಂಭ ಗೊಂಡ ಮೂರೂ ಸೇತುವೆ ಗಳ ಕಾಮಗಾರಿ  ಅಪೂರ್ಣ ಗೊಂಡು ಇನ್ನೂ ಈ ಭಾಗದ ಜನರ ಆಶೋತ್ತರ ಗಳಿಗೆ ತಣ್ಣೀರೆರೆಚಿವೆ. 

ಪ್ರತಿಯೊಂದು ಗ್ರಾಮಗಳಲ್ಲಿ ಸಾವಿರಾರು ಬಡ ಕುಟುಂಬ ಗಳು ವಾಸವಾಗಿದ್ದು, ಈ ಹಿಂದೆ ಪ್ರತಿ ನಿತ್ಯದ ಜೀವನ ನಿರ್ವಹಣೆಗೆ ದೋಣಿ, ತೆಪ್ಪ ಮೊದಲಾದವುಗಳ ಮೊರೆ ಹೋಗಿ ಪ್ರತಿನಿತ್ಯ ಜೀವದ ಹಂಗು ತೊರೆದು  ಬದುಕು ಕಟ್ಟಿಕೊಳ್ಳುತ್ತಿದ್ದ ಜನರಿಗೆ, ಈ ಸೇತುವೆಗಳ ಮಂಜೂರಾತಿ  ಮರುಭೂಮಿಯಲ್ಲಿ ನೀರು ಸಿಕ್ಕಿದಷ್ಟು ಸಂತೋಷವನ್ನು ತಂದು ಕೊಟ್ಟಿದ್ದವು.  ಆದರೆ ಈ ಸೇತುವೆಗಳ ಕಾಮಗಾರಿಗಳು ಗುತ್ತಿಗೆದಾರ ಕಂಪನಿ ಹಾಗೂ ನಮ್ಮನಾಳುವವರ ಇಚ್ಛಾ ಶಕ್ತಿಯ ಕೊರತೆ ಯಿಂದಾಗಿ ಇನ್ನೂ ಅಪೂರ್ಣ ವಾಗಿಯೇ ಉಳಿದು ಕೊಂಡಿವೆ. ವಯೋವೃದ್ಧ ಮಹಿಳೆಯರು, ಪುರುಷರು, ಮಕ್ಕಳು, ಅನಾರೋಗ್ಯ ಪೀಡಿತರು ಈ ಸೇತುವೆಗಳ ಮೂಲಕ ಹರ ಸಾಹಸ ಮಾಡಿಕೊಂಡು ಸಂಚರಿಸುವ ಪರಿಸ್ಥಿತಿ ಬಂದೊದಗಿದೆ. ಕಾರಣ ಜಿಲ್ಲಾಧಿಕಾರಿಗಳು ತಮ್ಮ ವಿಶೇಷ ಗಮನ ಹಾಗೂ ಆಸಕ್ತಿಯನ್ನು ವಹಿಸಿ ಈ ಅಪೂರ್ಣ ಕಾಮಗಾರಿಗಳನ್ನು ಆದಷ್ಟು ಶೀಘ್ರ ದಲ್ಲಿ ಪೂರ್ಣ ಗೊಳಿಸಿ ಶಾಶ್ವತ ಪರಿಹಾರ ನೀಡಿ  ಜನರ ನೆಮ್ಮದಿಯ ಜೀವನಕ್ಕೆ ಅನುವು  ಮಾಡಿ ಕೊಡುವಂತೆ ಲೋಕ ಶಕ್ತಿ ಪಕ್ಷದ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ದಿನೇಶಚಂದ್ರ ಎನ್. ಅಂಗಡಿಕೇರಿ ಜಿಲ್ಲಾಧಿಕಾರಿಗೆ ಆಗ್ರಹಿಸಿದ್ದಾರೆ.

Read These Next

ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...