ಶ್ರೀನಿವಾಸಪುರ : ಕೊರೊನಾದಿಂದ ಸಂಕಷ್ಟದಲ್ಲಿರುವ ಅಲ್ಪ ಸಂಖ್ಯಾತರಿಗೆ ರಂಜಾನ್ ಆಚರಣೆ ಮಾಡಲು ಸಮಾಜ ಸೇವಕ ಹಾಗೂ ನಿರ್ಣಯ ವಾರಪತ್ರಿಕೆ ಸಂಪಾದಕರು ಎಸ್. ನಾರಾಯಣಸ್ವಾಮಿ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು.
ಕಿಟ್ ವಿತರಿಸಿ ಮಾತನಾಡಿದ ಅವರು, ಕೊರೊನಾ ಭೀತಿ ಜನರಲ್ಲಿ ಆವರಿಸಿಕೊಂಡಿದೆ. ಕೆಲ ವರು ಜೀವನ ಮಾಡಲು ಕೆಲಸ ಕಾರ್ಯಗಳಿಲ್ಲದೇ ಸಂಕಷ್ಟ ದಲ್ಲಿದ್ದಾರೆ. ಹಾಗಾಗಿ ಅವರಿಗೆ ಒಂದಿಷ್ಟು ಸಹಾಯ ಮಾಡುವ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಕುಟುಂಬಗಳಿಗೆ ದಿನಸಿ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಅನೀಸ್ ಅಹಮ್ಮದ್, ಅಮೀರ್ಖಾನ್, ನಜೀರ್ ಅಹದ್ ಇದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ