ದಿಲ್ಲಿ ದಂಗೆಗಳು: ಅಸಡ್ಡೆಗಾಗಿ ಪೊಲೀಸ್ ಅಧಿಕಾರಿಯಿಂದ ದಂಡ
ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ಸಂಭವಿಸಿದ್ದ ದಂಗೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ತನ್ನ ಮುಂದೆ ಹಾಜರಾಗಲು ವಿಫಲಗೊಂಡಿದ್ದ ಮತ್ತು ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದ ಪೊಲೀಸ್ ಅಧಿಕಾರಿಯ ವಿರುದ್ಧ ವಿಚಾರಣೆ ನಡೆಸುವಂತೆ ಮತ್ತು ಅವರ ವೇತನದಿಂದ 5,000 ರೂ. ಕಡಿತಗೊಳಿಸುವಂತೆ ಇಲ್ಲಿಯ ಮುಖ್ಯ ಮಹಾನಗರ ನ್ಯಾಯಾಲಯವು ದಿಲ್ಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. ಪದೇ ಪದೇ ಆದೇಶಿಸಿದ್ದರೂ ಪೊಲೀಸ್ ಅಧಿಕಾರಿ ವಿಚಾರಣೆಗೆ ಹಾಜರಾಗಲು ವಿಫಲರಾಗಿದ್ದರು ಎಂದು ನ್ಯಾಯಾಲಯವು ಬೆಟ್ಟು ಮಾಡಿದೆ.
ದಂಗೆ ಪ್ರಕರಣಗಳಲ್ಲಿ ಹೆಸರಿಸಲಾಗಿ ರುವ ಆರೋಪಿಗಳಿಗೆ ಜಾಮೀನು ಮ೦ಜೂರು ಮಾಡಿರುವ ನ್ಯಾಯಾಲಯದ ಹಲವಾರು ಆದೇಶಗಳಲ್ಲಿ ದಿಲ್ಲಿ ಪೊಲೀಸರ ತನಿಖಾ ವೈಖರಿಯನ್ನು ಟೀಕಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ವಿಶೇಷ ಸರಕಾರಿ ಅಭಿಯೋಜ ಕರು ಮತ್ತು ತನಿಖಾಧಿಕಾರಿಗಳು ನಿಗದಿತ ದಿನಾ೦ಕಗ೮೦ದು ವಿಚಾರಣೆಗೆ ಹಾಜರಾಗುತ್ತಿಲ್ಲ ಮತ್ತು ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಹಾಜರಾದಾಗ ಕಡತಗಳ ಬಗ್ಗೆ ಯಾವುದೇ ಮಾಹಿತಿಗಳನ್ನು ಹೊಂದಿರುವುದಿಲ್ಲ ಹಾಗೂ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಪ್ರಕರಣವನ್ನು ಮುಂದೂಡುವಂತೆ ಕೋರುತ್ತಾರೆ ಎಂದು ನ್ಯಾ.ಎ.ಕೆ.ಗರ್ಗ್ ಅವರು ತನ್ನ ಸೆ.25ರ ಆದೇಶದಲ್ಲಿ ಹೇಳಿದ್ದಾರೆ.