ಉಮರ್‌ ಖಾಲಿದ್ ವಿರುದ್ಧದ ಚಾರ್ಜ್‌ಶೀಟ್ ಟಿವಿ ಸ್ಕ್ರಿಪ್ಟ್ ನಂತಿದೆ; ಖಾಲಿದ್ ವಕೀಲರ ವಾದ ಮಂಡನೆ

Source: VB | By I.G. Bhatkali | Published on 4th September 2021, 7:14 PM | National News |

ಹೊಸದಿಲ್ಲಿ: ದಿಲ್ಲಿ ಗಲಭೆ ಸಂಚು ಪ್ರಕರಣದ ಆರೋಪದಲ್ಲಿ ತನ್ನ ಕಕ್ಷಿದಾರನಾದ ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ವಿರುದ್ಧ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯು ಸಿದ್ಧಪಡಿಸಿದ ಟಿವಿ ಚಿತ್ರಕಥೆಯಂತಿದೆ ಎಂದು ಅವರ ವಕೀಲ ತ್ರಿದೀಪ್ ಪಾಯಸ್ ಶುಕ್ರವಾರ ಹೇಳಿದ್ದಾರೆ ಮತ್ತು ಉಮರ್ ಖಾಲಿದ್ ವಿರುದ್ಧ ಹೊರಿಸಲಾದ ಆರೋಪಗಳಿಗೆ ಯಾವುದೇ ಆಧಾರವಿಲ್ಲವೆಂದು ಅವರು ಹೇಳಿದ್ದಾರೆ.

ದಿಲ್ಲಿ ಸೆಶನ್ಸ್‌ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ಆಲಿಕೆ ನಡೆಸಿದ ಸಂದರ್ಭ ವಾದಮಂಡಿಸಿದ ಪಾಯಸ್ ಅವರು ದೋಷಾರೋಪ ಪಟ್ಟಿಯ ಕರಡನ್ನು ಸಿದ್ಧಪಡಿಸಿದ ಅಧಿಕಾರಿ ಕೋಮುವಾದಿ ಮನಸ್ಥಿತಿಯುಳ್ಳವರು ಎಂದು ಆರೋಪಿಸಿದರು. ಉಮರ್ ಖಾಲಿದ್ ವಿರುದ್ಧ ಪೊಲೀಸರು ಸಲ್ಲಿಸಿರುವ ದೋಷಾರೋಪಪಟ್ಟಿಯು 'ಕಿರುಚಾಡುವ ಸುದ್ದಿ ವಾಹಿನಿಗಳಲ್ಲಿನ 9 ಗಂಟೆಯ ಸುದ್ದಿಗಳ ಸ್ಕ್ರಿಪ್ಟ್ ಅನ್ನು ಓದಿದ ಹಾಗಾಗುತ್ತದೆ' ಎಂದು ವ್ಯಂಗ್ಯವಾಡಿದರು ಹಾಗೂ ಈ ಚಾಚ್ ೯ಶೀಟ್ ತನಿಖಾ ಅಧಿಕಾರಿಯವರ ಫಲವತ್ತಾದ ಕಲ್ಪನೆಯ ಪ್ರತಿಬಿಂಬವಾಗಿದೆ ಎಂದರು.

ದಿಲ್ಲಿ ಗಲಭೆಗೆ ಸಂಬಂಧಿಸಿ ಖಾಲಿದ್ ವಿರುದ್ಧ ದಿಲ್ಲಿ ಪೊಲೀಸರ ಬಳಿ ಯಾವುದೇ ಪುರಾವೆಯಿಲ್ಲವೆಂದು ಹಿಂದಿನ ವಿಚಾರಣೆಯ ಸಂದರ್ಭ ಪಾಯಸ್ ಅವರು ವಾದಿಸಿದ್ದರು. ಜೆಎನ್‌ಯು ವಿವಿಯ ಮಾಜಿ ವಿದ್ಯಾರ್ಥಿಯಾದ ಖಾಲಿದ್ ಅವರು ಮಹಾರಾಷ್ಟ್ರದ ಅಮರಾವತಿಯಲ್ಲಿ ಮಾಡಿದ್ದ ಭಾಷಣದ ಮೊಟಕುಗೊಳಿಸಿದ ವೀಡಿಯೊ ತುಣುಕುಗಳನ್ನು ಇಡೀ ಪ್ರಕರಣವು ಆಧರಿಸಿದೆ ಎಂದವರು ಗಮನಸೆಳೆದಿದ್ದರು.

ಖಾಲಿದ್ ವಿರುದ್ಧ ಸಾಕ್ಷಿದಾರರು ನೀಡಿದ ಹೇಳಿಕೆಗಳು ಕಪೋಲಕಲ್ಪಿತವಾದವು ಎಂದು ಹೇಳುವ ಮೂಲಕ ತನ್ನ ವಾದವನ್ನು ಆರಂಭಿಸಿದ ಪಾಯಸ್ ಅವರು ಸಾಕ್ಷಿಗಳಲ್ಲೊಬ್ಬಾತ ಒತ್ತಡಕ್ಕೊಳಗಾಗಿ ಹೇಳಿಕೆ ನೀಡಿದ್ದಾರೆ ಎಂದರು. ಸಂರಕ್ಷಿತ ಸಾಕ್ಷಿಯೊಬ್ಬ ಇನ್ನೊಂದು ಎಫ್‌ಐಆರ್‌ನಲ್ಲಿ ಅಸಂಗತವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...