ಸಂಸದ ಅನಂತಕುಮಾರ ಹೆಗಡೆ ಹುಡುಕಿಕೊಡಿ: ಉತ್ತರಕನ್ನಡ ಜನತೆಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸನ್ ಮನವಿ.
ಕಾರವಾರ : ಸಂಸದರು ಜನಸಾಮಾನ್ಯರ ಸಂಕಷ್ಟಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಒದಗಿಸಬಹುದಿತ್ತು. ಆದ್ರೆ ಉತ್ತರಕನ್ನಡ ಸಂಸದ ಅನಂತಕುಮಾರ್ ಹೆಗಡೆ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸನ್ ಜನರಲ್ಲಿ ಕೈ ಮುಗಿದು ಬೇಡಿಕೊಂಡಿದ್ದಾರೆ.
ಕಾರವಾರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಸಂಸದ ಅನಂತ ಕುಮಾರ್ ಹೆಗಡೆ ಏಲ್ಲಿದ್ದಾರೆಂಬುದು ಗೊತ್ತಿಲ್ಲ. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಅನಂತಕುಮಾರ ಹೆಗಡೆ ಬಾರೀ ಮಾತನಾಡಿದ್ದರು. ಆದರೀಗ ಅವರು ಏನು ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ ಎಂದರು.
ಸಚಿವರು ಕೂಡಾ ಅಸೆಂಬ್ಲಿ, ಮನೆಬಿಟ್ಟು ಏಲ್ಲಿಯೂ ಬರುತ್ತಿಲ್ಲ. ಜನಸಾಮಾನ್ಯರು ಯಾರ ಹತ್ತಿರ ಹೋಗಿ ತಮ್ಮ ನೋವು ತೋಡಿಕೊಳ್ಳಬೇಕು. ಜನರಿಗೆ ವ್ಯವಸ್ಥೆ ಮಾಡೋದು ಬಿಟ್ಟು ಸಿಎಂ ಬದಲಾವಣೆ ಮಾಡೋಕೆ ಹೊರಟಿದ್ದಾರೆ. ಇವರಿಗೇನು ಮಾನ ಮರ್ಯಾದೆ ಇದೆಯಾ ಎಂದು ಶ್ರೀನಿವಾಸನ್ ಆಕ್ರೋಶ ವ್ಯಕ್ತಪಡಿಸಿದರು.
ಕೆಲವರು ರೆಸಾರ್ಟ್ನಲ್ಲಿ ಕುಳಿತಿದ್ದಾರೆ. ಇನ್ನು ಕೆಲವು ದೆಹಲಿಯಲ್ಲಿ ಕುಳಿತಿದ್ದಾರೆ.
ಜನರಿಗೆ ಸಹಾಯ ಮಾಡದಿದ್ರೆ ಮುಂದಿನ ದಿನಗಳಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯ ಬಿಜೆಪಿ ಸರಕಾರ ಟೆಲಿವಿಷನ್ ಸರಕಾರ, ಇದಕ್ಕೆ ಯಾವುದೇ ವಿಷನ್ ಇಲ್ಲ. ಮೀನುಗಾರರು, ರೈತರು, ಕೆಲಸ ಕಳೆದುಕೊಂಡ ಯುವಕರಿಗೆ ಆರ್ಥಿಕ ಸಹಾಯ ನೀಡುತ್ತಿಲ್ಲ. ಕಮಿಷನ್ ಎಷ್ಟು ಹೊಡಿಬೇಕು ಅಂತಾ ಯೋಚನೆ ಮಾಡುವ ಇವರು ಖಾಸಗಿ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ತೆಗೊಳ್ಳಿ ಅಂತಾರೆ. ಪ್ರಚಾರ ಮಾಡ್ಕೊಳೋ ಇವರಿಗೆ ಮಾನ ಮರ್ಯಾದೆ ಇದೆಯಾ. ವ್ಯಾಕ್ಸಿನ್ಗಳನ್ನು ಕೇಂದ್ರ ಸರಕಾರ ಹೊರದೇಶಕ್ಕೆ ರಫ್ತು ಮಾಡುತ್ತಿದೆ. ಭಾರತ ಆಕ್ಸಿಜನ್ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಎರಡನೇ ಸ್ಥಾನ ಹೊಂದಿದೆ
ಆದರೆ, ಜನರು ಆಕ್ಸಿಜನ್ ಇಲ್ಲದೇ ಸಾಯುತ್ತಿರುವುದಕ್ಕೆ ಖೇದ ವ್ಯಕ್ತಪಡಿಸಿದರು.
ಕೊರೊನಾ ಮೊದಲ ಅಲೆ ಹಾಗೂ ಎರಡನೇ ಅಲೆ ಬರುತ್ತೆ ಅಂತಾ ಮೊದಲಿಗೆ ರಾಹುಲ್ ಗಾಂಧಿ ಹೇಳಿದ್ದರು. ಆದರೆ ಚುನಾವಣೆಯೇ ಮುಖ್ಯ ಎಂದು ಮಂತ್ರಿಮಹೋದಯರು ಎಲೆಕ್ಷನ್ನಲ್ಲಿ ಬ್ಯುಸಿ ಆಗಿದ್ದರು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಸತೀಶ ಸೈಲ್, ಸುಪ್ರಿಮಕೋರ್ಟ್ ನ್ಯಾಯವಾದಿ ದೇವದತ್ತ ಕಾಮತ್, ಸಂದೀಪ ಶೆಟ್ಟಿ, ಶಂಭು ಶೆಟ್ಟಿ ಸೇರಿದಂತೆ ಇತರರು ಇದ್ದರು.