ಕೆಮ್ಮು ಸಿರಪ್ ಸೇವಿಸಿ ಉಝಕಿಸ್ತಾನ ಮಕ್ಕಳ ಸಾವು ಪ್ರಕರಣ; ಮರಿಯೋನ್ ಬಯೋಟೆಕ್ನ ಉತ್ಪಾದನಾ ಪರವಾನಿಗೆ ಸ್ಥಗಿತ
ಹೊಸದಿಲ್ಲಿ: ನೋಯ್ಡಾದಲ್ಲಿರುವ ಔಷಧ ತಯಾರಿಕಾ ಕಂಪೆನಿ ಮರಿಯೋನ್ ಬಯೋ ಟೆಕ್ಗೆ ನೀಡಲಾಗಿರುವ ಉತ್ಪಾ ದನಾ ಪರವಾನಿಗೆಯನ್ನು ಅಮಾನತಿನಲ್ಲಿಡಲಾಗಿದೆ ಹಾಗೂ ಅದರ ವಿವಾದಾಸ್ಪದ ಕೆಮ್ಮು ಸಿರಪ್ನ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ಉತ್ತರಪ್ರದೇಶದ ಔಷಧ ಇಲಾಖೆಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ಈ ಕಂಪೆನಿಯ ಕೆಮ್ಮು ಸಿರಪ್ ಸೇವಿಸಿ ಉಝಕಿಸ್ತಾನದಲ್ಲಿ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಆರೋಪಿಸಲಾಗಿದೆ.