ಗೋಕರ್ಣದಲ್ಲಿ ಈಜಲು ಹೋದ ಮೂವರು ಪ್ರವಾಸಿಗರ ಸಾವು.
ಕುಮಟಾ : ತಾಲೂಕಿನ ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಮೂರು ಜನ ಪ್ರವಾಸಿಗರು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಬೆಂಗಳೂರಿನಿಂದ ಹೆಬ್ಬಗೋಡಿಯಿಂದ ಒಟ್ಟು 16 ಜನ ಪ್ರವಾಸಿಗರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಶ್ರೀ ಮಹಾಬಲೇಶ್ವರ ದೇವರ ದರ್ಶನ ಪಡೆದ ಬಳಿಕ ಮುಂಭಾಗದಲ್ಲಿರುವ ಮುಖ್ಯ ಕಡಲತೀರಕ್ಕೆ ಹೋಗಿದ್ದರು. ಎಲ್ಲರೂ ಸೇರಿ ನೀರಿನಲ್ಲಿ ಆಟವಾಡುತ್ತಿರುವಾಗ ನೀರಿನ ಅಲೆಗೆ ಐವರು ಕೊಚ್ಚಿ ಹೋಗಿದ್ದರು. ಅಲ್ಲಿಯೇ ಇದ್ದ ಸ್ಥಳೀಯರು ಒಟ್ಟು ಐವರನ್ನ ಎಳೆದು ತಂದಿದ್ದರು. ಆದರೆ ಮೂವರು ಸಾವನ್ನಪ್ಪಿದ್ದಾರೆ. ಸುಮಾ ಸಿದ್ದರಾಜು (21), ತಿಪ್ಪೇಶ ನಾಯಕ್ (20), ರವಿ (35), ಮೃತರಾಗಿದ್ದಾರೆ.
ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರೆಂದು ಎನ್ನಲಾಗಿದೆ.
ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.