ಭಟ್ಕಳ : ತಾಲೂಕಿನ ಗಡಿ ಭಾಗ ಬೆಳಕೆಯಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿದೆ.
ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಸಮೀಪದ ಮನೆಯೊಂದಕ್ಕೆ ಹಾಡುಹಗಲೇ ಕಳ್ಳರು ನುಗ್ಗಿ ಆರು ಸಾವಿರ ರೂಪಾಯಿ ಹಣ, ಗೇರುಬೀಜ ತುಂಬಿದ್ದ ಚೀಲ ಹಾಗೂ ಕೆಲವು ದಾಖಲೆಗಳನ್ನು ಕದ್ದು ಪರಾರಿಯಾಗಿದ್ದಾರೆ.
ತಿಮ್ಮಯ್ಯ ನಾಯ್ಕ ಎಂಬುವವರಿಗೆ ಸೇರಿದ ಮನೆಯೇ ಕಳ್ಳತನವಾಗಿದೆ. ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಕೃತ್ಯ ಏಸಗಿದ್ದಾರೆ.
ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದು ತನಿಖೆ ನಡೆಸುತ್ತಿದ್ದಾರೆ.