ಕುಂದಾಪುರ : ಬೈಂದೂರಿನಿಂದ ಕುಂದಾಪುರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ 66 ಆರಾಟೆಯ ಸೇತುವೆ ಬಿರುಕು ಕಾಣಿಸಿಕೊಂಡಿದೆ.
ಇತ್ತೀಚೆಗಷ್ಟೆ ಹೊಸದಾಗಿ ಸೇತುವೆ ನಿರ್ಮಿಸಲಾಗಿತ್ತು. ಹೊಸ ಸೇತುವೆ ನಿರ್ಮಾಣದ ಬಳಿಕ ಆರಾಟೆ ಬಳಿ ಏಕ ಮುಖ ಸಂಚಾರ ವ್ಯವಸ್ಥೆ ಮಾಡಲಾಗಿತ್ತು. ಕುಂದಾಪುರ ದಿಂದ ತೆರಳುವವರಿಗೆ ಹೊಸ ಸೇತುವೆ ಅನುಕೂಲವಾಗಿತ್ತು. ಇನ್ನೂ ಬರುವವರು ಹಳೆ ಸೇತುವೆ ಮೂಲಕ ಸಂಚರಿಸುತ್ತಿದ್ದರು.
ಆದರೆ ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಸಂಚಾರ ಬಂದ್ ಮಾಡಲಾಗಿದೆ. ಸದ್ಯ ಹಳೆಯ ಸೇತುವೆ ಮೂಲಕವೇ ಎರಡು ಬದಿಯ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.