ಕಾರವಾರ : ತಾಲೂಕಿನ ಮಲ್ಲಾಪುರದಿಂದ ಯಲ್ಲಾಪುರ ಕಡೆ ತೆರಳುವ ಮಾರ್ಗ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಾರೀ ಮಳೆಗೆ ರಸ್ತೆ ಬಿರುಕು ಬಿಟ್ಟಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಹರೂರು ಗ್ರಾಮದ ಸಮೀಪವೇ ಇರುವ ಈ ರಸ್ತೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಇದೆ. ರಸ್ತೆ ಬಿರುಕು ಬಿಟ್ಟಿರುವುದಕ್ಕೆ ಸ್ಥಳಿಯರು ಆತಂಕಗೊಂಡಿದ್ದಾರೆ. ಮುನ್ನೆಚ್ಚರಿಕೆಯಾಗಿ ರಸ್ತೆ ಸಂಚಾರ ನಿಲ್ಲಿಸಲಾಗಿದೆ.