ಕಾರವಾರ: ಜೂ. 21 ರಂದು ಆಧ್ಯತಾ ವಲಯದ ವ್ಯಾಪರಸ್ಥರಿಗೆ ಕೋವಿಡ್ ಲಸಿಕೆ
ಕಾರವಾರ: ನಗರ ವ್ಯಾಪ್ತಿಯಲ್ಲಿ ಬರುವ 18 ವರ್ಷ ಮೇಲ್ಪಟ ಆಧ್ಯತಾ ವಲಯದ ವ್ಯಾಪಾರಸ್ಥರು ಅಂಗಡಿಕಾರರಿಗೆ ಜೂನ್ 21 ರಂದು ಜಿಲ್ಲಾ ರಂಗಮಂದಿರ ಹಾಗೂ ನಂದಂಗದ್ದದ ಅಂಬೇಡ್ಕರ್ ಭವನದಲ್ಲಿ ಕೋವಿಡ್ ಲಸಿಕೆಯ ಮಹಾ ಮೇಳವನ್ನು ಆಯೋಜಿಸಲಾಗಿದೆ.
ಮೀನು ಮಾರಾಟಗಾರರು, ಬೀದಿ ಬದಿ ವ್ಯಾಪಾರಸ್ಥರು, ಕ್ಷೌರಿಕರು, ಕಿರಾಣಿ, ಹಾಲು, ಬೇಕರಿ ವ್ಯಾಪಾರಸ್ಥರು, ಕಟ್ಟಡ, ಕೂಲಿ ಕಾರ್ಮಿಕರು ಇತ್ಯಾದಿ ಆಧ್ಯತಾ ವಲಯದ ವ್ಯಾಪಾರಸ್ಥರು ಈ ಲಸಿಕಾ ಮೇಳದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಪೌರಾಯುಕ್ತ ಆರ್. ಪಿ. ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.