ಕಾರವಾರ: ಕಾರವಾರದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಕೋವಿಡ್ ಕಾರ್ಡ ಇನೋಗ್ರೇಷನ್ ಅನ್ನು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ ಅವರು ಉದ್ಘಾಟಿಸಿ ಮಾತನಾಡಿದ ಅವರು, ಈ ಕೋವಿಡ್ ಕಾರ್ಡ ಆಸ್ಪತ್ರೆಯಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿದ್ದು, ವೈದ್ಯರು ಇದರೊಂದಿಗೆ ಆತ್ಮಿಯವಾದ ಸಂವಹನ ಹೊಂದಲು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.
ಪ್ರಸಕ್ತ ದಿನದಲ್ಲಿ ಕೋವಿಡ್ ಮಹಾಮಾರಿಯಿಂದ ಜಗತ್ತು ತಲ್ಲಣಗೊಂಡಿದೆ. ಇಂತಹ ಸಮಯದಲ್ಲಿ ಆಸ್ಪತ್ರೆಯ ವಾರ್ಡಗಳಲ್ಲಿ ರೋಗಿಗಳನ್ನು ಶಿಫ್ಟ್ ಮಾಡಿದಾಗ ಅಲ್ಲಿರುವ ಕರ್ತವ್ಯ ನಿರತ ನರ್ಸಗಳಿಗೆ ಉತ್ತಮ ರೀತಿಯಲ್ಲಿ ಸಲಹೆ ಕೊಡಲು ಈ ಕೋವಿಡ್ ಕಾರ್ಡ ಬಹುಉಪಯುಕ್ತವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್ ಕೆ, ಮೆಡಿಕಲ್ ಕಾಲೇಜ್ನ ನಿರ್ದೇಶಕ ಗಜಾನನ ಎಚ್ ನಾಯ್ಕ, ಹರ್ಷ ಮೂರೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು, ಆಕಾಂಕ್ಷಾ ವಂದಿಸಿದರು.