'ಸರಕಾರಿ ತಾಲಿಬಾನ್ ಕೈಯಲ್ಲಿ ದೇಶ: ಟಿಕಾಯತ್ 'ಬಿಜೆಪಿ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ'

Source: VB News | By I.G. Bhatkali | Published on 30th August 2021, 1:56 PM | National News |

ಹೊಸದಿಲ್ಲಿ: ಹರ್ಯಾಣದ ಕರ್ನಾಲ್‌ನಲ್ಲಿ ಶನಿವಾರ ರೈತರ ಮೇಲೆ ಪೊಲೀಸರ ಲಾಠಿಪ್ರಹಾರಕ್ಕೆ ರವಿವಾರ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು, ರೈತರ ತಲೆಗಳನ್ನು ಒಡೆಯುವಂತೆ ಆದೇಶಿಸುವ ಸರಕಾರಿ ತಾಲಿಬಾನ್‌ಗಳು ದೇಶವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯು ಭಾರತೀಯ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ.

ಸುದ್ದಿಸಂಸ್ಥೆಯು ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ ಟಿಕಾಯತ್, ಸರಕಾರಿ ತಾಲಿಬಾನ್‌ಗಳು ದೇಶವನ್ನು ವಶಪಡಿಸಿಕೊಂಡಿದ್ದಾರೆ. ಅವರ ಕಮಾಂಡರ್‌ಗಳು ಈ ದೇಶದಲ್ಲಿದ್ದಾರೆ. ಈ ಕಮಾಂಡರ್‌ಗಳನ್ನು ಗುರುತಿಸಬೇಕಿದೆ. ರೈತರ ತಲೆ ಒಡೆಯಲು ಆದೇಶಿಸಿದ್ದ ವ್ಯಕ್ತಿ ಈ ಕಮಾಂಡರ್ ಗಳಲ್ಲಿ ಒಬ್ಬನಾಗಿದ್ದಾನೆ ಎಂದಿದ್ದಾರೆ. ಶನಿವಾರ ವೈರಲ್ ಆಗಿದ್ದ ವೀಡಿಯೊವನ್ನು ಪ್ರಸ್ತಾಪಿಸಿ ಟಿಕಾಯತ್ ಮಾತನಾಡುತ್ತಿದ್ದರು. 'ರೈತರ ತಲೆಗಳನ್ನು ಒಡೆಯಿರಿ' ಎಂದು ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಅವರು ಈ ವೀಡಿಯೊದಲ್ಲಿ ಪೊಲೀಸರಿಗೆ ಆದೇಶಿಸಿದ್ದರು.

ಇತ್ತೀಚೆಗೆ ಒಬ್ಬರು(ಕಲ್ಯಾಣ ಸಿಂಗ್) ನಿಧನರಾದಾಗ ಬಿಜೆಪಿಯವರು ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜವನ್ನು ಹೊದಿಸಿದ್ದರು. ಇದು ರಾಷ್ಟ್ರಧ್ವಜಕ್ಕೆ ಮಾಡಿರುವ ಅವಮಾನವಾಗಿದೆ. ಅವರು ರಾಷ್ಟ್ರಧ್ವಜವನ್ನೂ ಲೆಕ್ಕಿಸುವುದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ. ಶನಿವಾರ ಹರ್ಯಾಣ ಮುಖ್ಯಮಂತ್ರಿ ಎಂ.ಎಲ್. ಖಟ್ಟರ್ ಪಾಲ್ಗೊಂಡಿದ್ದ ಬಿಜೆಪಿ ಸಭೆಯನ್ನು ಪ್ರತಿಭಟಿಸಲು ಕರ್ನಾಲ್‌ಗೆ ತೆರಳುತ್ತಿದ್ದ ರೈತರ ಮೇಲೆ ಬಸ್ತಾರಾ ಟೋಲ್ ಪ್ಲಾಝಾದ ಬಳಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಘಟನೆಯಲ್ಲಿ ಕನಿಷ್ಠ 10 ರೈತರು ಗಾಯಗೊಂಡಿದ್ದರು. ಟೀಟ್‌ವೊಂದರಲ್ಲಿ ಖಟ್ಟರ್ ಅವರನ್ನು ಜಲಿಯನ್‌ವಾಲಾಬಾಗ್ ನಲ್ಲಿ ಜನರ ಹತ್ಯೆಗೆ ಆದೇಶಿಸಿದ್ದ ಬ್ರಿಟಿಷ್ ಜನರಲ್ ಡೈಯರ್‌ಗೆ ಹೋಲಿ ಸಿರುವ ಟಿಕಾಯತ್, ರೈತರ ಮೇಲೆ ಹರ್ಯಾಣ ಪೊಲೀಸರ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ರೈತರು ಇವೆಲ್ಲವನ್ನು ಮರೆಯುವುದಿಲ್ಲ 'ಎಂದೂ ಹೇಳಿದ್ದಾರೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...