ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೋನಾ ರಣಕೇಕೆ ಆರಂಭವಾಗಿದೆ. ಆರಂಭದ ದಿನದಲ್ಲಿ ಜಿಲ್ಲೆಯ ಭಟ್ಕಳದಲ್ಲಷ್ಟೆ ಕಾಣಿಸಿಕೊಂಡ ಕೊರೋನಾ ಸೋಂಕು ಇದೀಗ ಜಿಲ್ಲೆಯ ತುಂಬಾ ತನ್ನ ಕದಂಬ ಬಾಹು ಚಾಚಿದೆ. ಒಂದು ಒಂದೆ ದಿನ ಜಿಲ್ಲೆಯಲ್ಲಿ 23 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗತ್ತಾ ಇದೆ.
ಭಟ್ಕಳ ತಾಲೂಕು ಒಂದರಲ್ಲೆ 11ಜನರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಅಂಕೋಲಾದಲ್ಲಿ 5, ಕುಮಟ 6, ಕಾರವಾರದಲ್ಲಿ ಓರ್ವರಿಗೆ ಸೋಂಕು ದೃಢಪಟ್ಟಿದೆ.
ಇನ್ನೂ ಜೂನ್ 25ರಂದು ಭಟ್ಕಳದಲ್ಲಿ ನಡೆದ ಮದುವೆಗೆ ಹೋಗಿದ್ದ 10ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಜನತೆಯನ್ನ ಬೆಚ್ಚಿ ಬಿಳಿಸಿದೆ. ಭಟ್ಕಳದ ಯುವತಿಯನ್ನ ವಿವಾಹವಾದ 26 ವರ್ಷದ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಈತನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನೂ ಈತನ ಮದುವೆಗೆ ಹೋದ ಹೆಚ್ಚಿನವರಲ್ಲಿ ಇದೀಗ ಸೋಂಕು ಕಾಣಿಸಿಕೊಂಡಿದೆ.ಇನ್ನೂ ಅಂಕೋಲಾ ತಾಲೂಕಿನ ಪೇಷೇಂಟ್ ನಂಬರ್ 10648ರ ಸಂಪರ್ಕದಿಂದ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಿನ್ನೆಯವರೆಗೆ 253ಇದ್ದ ಸೋಂಕಿತರ ಸಂಖ್ಯೆ ಇಂದಿನ 23ಸೇರಿ ಸೋಂಕಿತರ ಸಂಖ್ಯೆ 276ಏರಿಕೆ ಆಗಿದೆ