ಶಿರಸಿ : ನಗರದ ಸಾಮ್ರಾಟ ಹೋಟೇಲ್ ಎದುರಿಗಿರುವ ಜಾಗದಲ್ಲಿಟ್ಟಿದ್ದ ತಾಮ್ರದ ಹಂಡೆ ಕದ್ದ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.
ಸಲಿಂ ಸಾಬ್ಯಾನಸಾಬ ಶಿವಮೊಗ್ಗ (31) ದೇವಿದಾಸ ಪಾಪಾ ಗೋಸಾವಿ (25) ಗಣೇಶನಗರ ಬಂಧಿತ ಕಳ್ಳರು.
ನೀಲಕಂಠ ನಾರಾಯಣ ಮುರ್ಡೇಶ್ವರ ಎಂಬುವವರ ಮನೆಯ ಎದುರಿನ ಜಾಗದಲ್ಲಿಟ್ಟ. ತಾಮ್ರದ ಹಂಡೆಯನ್ನ ಕದ್ದು ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.