ಎಲ್‌ಪಿಜಿ ತುಟ್ಟಿ ಸಿಲಿಂಡರ್‌ಗೆ 25 ರೂ. ಏರಿಕೆ; ಒಂದೇ ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ

Source: VB | By I.G. Bhatkali | Published on 4th September 2021, 6:38 PM | National News |

ಹೊಸದಿಲ್ಲಿ: ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಏರಿಕೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ.

14.2 ಕೆ.ಜಿ. ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬುಧವಾರ 25 ರೂ. ಏರಿಕೆಯಾಗಿದೆ. ಒಂದೇ ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಒಂದೇ ಏರಿಕೆಯಾಗಿರುವುದು ಇದು ಎರಡನೇ ಬಾರಿಯಾಗಿದೆ. ಆಗಸ್ಟ್ 18ರಂದು ಸಾರ್ವಜನಿಕ ರಂಗದ ಅನಿಲ ಸಂಸ್ಥೆಗಳು ಎಲ್‌ಪಿಜಿ ಸಿಲಿಂಡರ್ ದರದಲ್ಲಿ 25 ರೂ. ಎರಡು ಬಾರಿ ಏರಿಕೆ ಮಾಡಿದ್ದವು.

ಬುಧವಾರದ ಬೆಲೆ ಏರಿಕೆಯ ಬಳಿಕ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರವು ದಿಲ್ಲಿಯಲ್ಲಿ 884.50 ರೂ. ಆಗಿದೆ. ಮುಂಬೈ 884.50 ರೂ., ಕೋಲ್ಕತಾ 911 ರೂ. ಹಾಗೂ ಚೆನ್ನೈನಲ್ಲಿ 900.50 ರೂ.ಗೆ ತಲುಪಿದೆ.

ವಾಣಿಜ್ಯ ಬಳಕೆಗಾಗಿನ 19 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರದಲ್ಲೂ 75 ರೂ. ಹೆಚ್ಚಾಗಿದೆ. ಈಗ ದಿಲ್ಲಿಯಲ್ಲಿ ಅದರ ಬೆಲೆ 1,693 ರೂ., ಮುಂಬೈ 1,649.50 ರೂ., ಕೋಲ್ಕತಾ 1,772 ರೂ. ಹಾಗೂ ಚೆನ್ನೈನಲ್ಲಿ 1,831 ರೂ. ಆಗಿದೆ.

ಈ ಮಧ್ಯೆ ತೈಲ ದರದಲ್ಲಿ 13ರಿಂದ 15 ಪೈಸೆಯಷ್ಟು ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಇದರಿಂದಾಗಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 101.34 ರೂ. ಹಾಗೂ ಡೀಸೆಲ್ 88.77 ರೂ. ಆಗಿದೆ. ಅದೇ ರೀತಿ ಮುಂಬೈಯಲ್ಲಿ 

ಪೆಟ್ರೋಲ್ ಬೆಲೆಯು ಲೀಟರ್‌ಗೆ 107.39 ರೂ. ಹಾಗೂ ಡೀಸೆಲ್ 96.33 ರೂ. ಆಗಿದೆ. ಎಲ್ ಪಿಜಿ ಸಿಲಿಂಡರ್‌ ದರದಲ್ಲಿ ನಿರಂತರ ಏರಿಕೆ ಮಾಡುತ್ತಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾರ್ವಜನಿಕರನ್ನು ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಮಾಡುವ ಈ ನಾಯಕ ಸ್ವತಃ ತನ್ನ ಗೆಳೆಯರ ನೆರಳಿನಡಿ ನಿದ್ರಿಸುತ್ತಿದ್ದಾರೆ.ಆದರೆ ದೇಶವು ಈ ಅನ್ಯಾಯದ ವಿರುದ್ಧ ಒಗ್ಗಟ್ಟಾಗುತ್ತಿದೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಪರೋಕ್ಷವಾಗಿ ಪ್ರಸ್ತಾವಿಸುತ್ತಾ ಟೀಕಿಸಿದ್ದಾರೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...