ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಸೇವನೆ; ಪ್ರಕರಣ ದಾಖಲು

Source: SO NEWS | By MV Bhatkal | Published on 5th July 2022, 11:51 PM | Coastal News |

ಭಟ್ಕಳ:ತಾಲೂಕಿನ ಬೈಲೂರು ತೆಂಗಾರ ಗೂಡ ಅಂಗಡಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಸಾರಾಯಿ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಮೂವರು ಪರಾರಿಯಾಗಿರುವ ಘಟನೆ ನಡೆದಿದೆ.
ಆರೋಪಿಯನ್ನು ತಾಲೂಕಿನ ಬೈಲೂರು ತೆಂಗಾರ ನಿವಾಸಿ ರಮೇಶ ಶನಿಯಾರ ನಾಯ್ಕ (53) ಎಂದು ಗುರುತಿಸಲಾಗಿದೆ. ಪೊಲೀಸರು 180 ಎಮ್‌ಎಲ್ ಅಳತೆಯ 3 ಓಲ್ಡ್ ಟಾವರ್ನ್ ವಿಸ್ಕಿ ಪ್ಯಾಕೇಟ್‌ಗಳು, 90 ಎಮ್‌ಎಲ್ ಅಳತೆಯ ಹೇವಾರ್ಡ್ಸ್ ಚೀಯರ್ ವಿಸ್ಕಿ 5 ಪ್ಯಾಕೇಟ್‌ಗಳು, 90 ಎಮ್‌ಎಲ್ ಅಳತೆಯ 4 ಬೆಂಗಳೂರು ವಿಸ್ಕಿ ಪ್ಯಾಕೇಟ್‌ಗಳು, 90 ಎಮ್‌ಎಲ್ ಅಳತೆಯ 4 ಹೇವಾರ್ಡ್ ಪ್ಯಾಕೇಟ್‌ಗಳು ಹಾಗೂ ಲೋಟಗಳನ್ನು ಪೊಲೀಸರು ಜಪ್ತುಪಡಿಸಿಕೊಂಡಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read These Next

ಎರಡು ವರ್ಷಗಳಿಂದ ಮೃತ ಮೀನುಗಾರ ಕುಟುಂಬಕ್ಕೆ ಪರಿಹಾರವಿಲ್ಲ. ಅಧಿಕಾರಿಗಳ ಉತ್ತರಕ್ಕೆ ಸಚಿವ ಮಂಕಾಳ ವೈದ್ಯ ಅಸಮಧಾನ.

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಮೃತಪಟ್ಟಿರುವ 40 ಮೀನುಗಾರ ಕುಟುಂಬಕ್ಕೆ ಸಂಕಷ್ಟ ಪರಿಹಾರ ನಿಧಿಯಿಂದ ...

ಪಕ್ಷದ ಕಾರ್ಯಕರ್ತರ ಹಿತಕಾಪಾಡಲು ಕುಮಟಾ ಕ್ಷೇತ್ರದಲ್ಲೇ ವಾಸ್ತವ್ಯ: ನಿವೇದಿತ್ ಆಳ್ವಾ

ಹೊನ್ನಾವರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಗೆಲುವಿಗಾಗಿ ಹಗಲು-ರಾತ್ರಿ ಪರಿಶ್ರಮಿಸಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಿತ ...