ಮುಂಡಗೋಡ : ಮುಂಡಗೋಡ ಕಾಂಗ್ರೆಸ್ ಹಿರಿಯ ಧುರಿಣ, ಸಮಾಜ ಸೇವಕ, ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ ಕರಿಂಸಾಬ ಆರ್. ಬಾಳೆಕಾಯಿ ಹೃದಯ ಸ್ಥಂಭದಿಂದ ಗುರುವಾರ ನಿಧನರಾಗಿದ್ದಾರೆ.
ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ಮೃತರಿಗೆ ಧರ್ಮಪತ್ನಿ, 3 ಹೆಣ್ಣುಮಕ್ಕಳು, 1 ಗಂಡುಮಗನನ್ನು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ ತಾಲೂಕಿನ ಇಂದೂರ ಗ್ರಾಮದವರಾದ ಅವರು ತಾಲೂಕಿನಲ್ಲಿ ತಮ್ಮದೆ ಛಾಪು ಮೂಡಿಸಿದ್ದ ಅವರು ಎಲ್ಲ ಸಮಾಜದೊಂದಿಗೆ ಸಹಕಾರ ಮನೋಭಾವದಿಂದ ನಡೆದುಕೊಂಡು ಹೋಗುವ ವ್ಯಕ್ತಿಯಾಗಿದ್ದರು. ಇಂದೂರ ಗ್ರಾಮ ಪಂಚಾಯತ್ ದ ಪ್ರಧಾನರಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ಅವರು ಈ ಹಿಂದೆ ಉತ್ತರಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಶುದ್ಧಹಸ್ತರಾಗಿದ್ದ ಇವರ ನಿಧನದಿಂದ ಮುಂಡಗೋಡ ಕಾಂಗ್ರೆಸ್ ಬಡವಾಗಿದೆ ಎಂದು ಮಾಜಿ ಮಂತ್ರಿ ಆರ್.ವಿ.ದೇಶಪಾಂಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯಕ್, ತಾಲೂಕ ಅಧ್ಯಕ್ಷ ಕೃಷ್ಣ ಹಿರಳ್ಳಿ, ಫಕ್ರುಸಾಬ(ಬಾಬ) ಬೇಂಡಿಗೇರ, ಎಚ್.ಎಮ್.ನಾಯ್ಕ್, ಧರ್ಮರಾಜ ನಡೆಗೆರ, ನೂರಾನಿ ಮಸ್ಜೀದ ಅಧ್ಯಕ್ಷ ಮಹ್ಮದಸಲೀಂ ನಂದಿಗಟ್ಟಿ,ಅಲ್ಪಸಂಖ್ಯಾತರ ರಾಜ್ಯಕಮೀಟಿಯ ಕೋಆರ್ಡಿನೇಟರ ಎಮ್.ಎನ್.ಧುಂಡಶಿ, ಹಿರಿಯ ಧುರಿಣ ನೂರ್ಬೇಗ್, ರಜಾಕೀಯ ಮಸೀದಿ ಅಧ್ಯಕ್ಷ ನಜೀರಅಹ್ಮದ ದರ್ಗಾವಾಲೆ, ಅನಿಸ ಅತ್ತಾರ ಪಟ್ಟಣ ಪಂಚಾಯತ್ ಸದಸ್ಯರಾದ ಮಹ್ಮದಗೌಸ ಮಕಾನದಾರ, ಮಹ್ಮದಜಾಫರ ಹಂಡಿ, ರಜಾ ಪಠಾಣ ಸೇರಿದಂತೆ ಮುಂತಾದವರು ಕಂಬನಿ ಮಿಡಿದಿದ್ದಾರೆ