ಮುಂಡಗೋಡ: ನೂರ ರೂಪಾಯಿ ಗಡಿದಾಟುತ್ತಿರುವ ಪೆಟ್ರೋಲ್ ಬೆಲೆಯನ್ನು ತಕ್ಷಣ ಕೆಳಗಿಳಿಸಿ ಬಡಜನರು ಹಾಗೂ ಮಧ್ಯಮ ವರ್ಗದ ಜನರು ತತ್ತರಿಸಿ ಕೆಂಗೆಟ್ಟಿ ಹೋಗಿದ್ದಾರೆ. ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಸಿಲಿಂಡರಿನ ಬೆಲೆ ಇಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರಳ್ಳಿ ಆಗ್ರಹಿಸಿ ಪ್ರತಿಭಟಿಸಿದರು
ಶನಿವಾರ ಬೆಳಗ್ಗೆ ಪಟ್ಟಣದ ಹುಬ್ಬಳ್ಳಿ -ಶಿರಸಿ ರಸ್ತೆಯಲ್ಲಿರುವ ಬೆಂಡಿಗೇರಿ ಪೆಟ್ರೋಲ್ ಪಂಪ ಹಾಗೂ ನಾಯಕ್ ಪೆಟ್ರೋಲ್ ಪಂಪಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್, ಡಿಸೇಲ್ ಏರಿಸುತ್ತಿರುವ ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು
ಜನರು ಕೊರೊನಾ ಸಂಕಷ್ಟದಲ್ಲಿ ಜೀವನ ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೆಲೆ ಏರಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಇವರಿಗೆ ಬಡವರ ಪಾಪ ತಟ್ಟುತ್ತದೆ ಎಂದು ಅಕ್ರೋಶ ಭರಿತರಾಗಿ ನುಡಿದರು.
ಕಾಂಗ್ರೆಸ್ ಸರಕಾರ ಸಣ್ಣ ಪ್ರಮಾಣದ ಪೆಟ್ರೋಲ್ ಬೆಲೆ ಏರಿಸಿದ್ದಾಗ ಬಿಜೆಪಿ ಮಂಚೂಣಿ ನಾಯಕರು ಬೀದಿಗೆ ಬಂದು ಉಗ್ರವಾಗಿ ಪ್ರತಿಭಟಿಸಿದ್ದರು ಈಗ 100 ರೂ ಪೆಟ್ರೋಲ್ ಬೆಲೆ ದಾಟಿದರೂ ಸಹಿತ ಒಬ್ಬರೇ ಒಬ್ಬ ಬಿಜೆಪಿ ನಾಯಕ ತುಟಿ ಪಿಟಿಕ್ ಎನ್ನುತ್ತಿಲ್ಲಾ ಇವರಿಗೆ ಜನಸಾಮನ್ಯರ ಕುರಿತು ಎಷ್ಟು ಕಾಳಜಿ ಇದೆ ಎಂದು ತೋರಿಸುತ್ತದೆ ಎಂದರು
ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡವರ ನೋವು ಕೊಡುವ ಸರ್ಕಾರಗಳು ಆಗಿದ್ದು ಅವು ಕೇವಲ ಶ್ರೀಮಂತರ ಪರವಾಗಿದೆ ಉದಾ: ಅಂಬಾನಿ, ಅದಾನಿ ಮುಂತಾದವರ ಪರವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಚ್.ಎಮ್.ನಾಯ್ಕ್ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರಕಾರಗಳ ವಿರುದ್ದ ಘೋಷಣೆ ಕೂಗಿದರು. ಪೆಟ್ರೋಲ್ ಬೆಲೆ ಇಳಿಸಿ ಜನಸಮಾನ್ಯರ ಬದುಕು ಉಳಿಸಿ ಎಂದು ಆಗ್ರಹಿಸಿದರು
ಧರ್ಮರಾಜ ನಡಿಗೇರ, ಧುರಿಣ ಎಮ್.ಎನ್.ದುಂಡಶಿ, ರಾಜೂ ಹಿರೇಮಠ, ಪಟ್ಟಣದ ಕಾಂಗ್ರೆಸ್ ಅಧ್ಯಕ್ಷ ಆಲೇಹಸನ ಬೆಂಡಿಗೇರಿ, ನಾಗರಾಜ ಹಂಚಿನಮನಿ, ಮುಂಡಗೋಡ ಕಾಂಗ್ರೆಸ್ ಉಸ್ತುವಾರಿ ಸುರೇಶ ಸವಣೂರ, ಬಸವರಾಜ ಅಸ್ತಕಟ್ಟಿ, ನಂದಿಗಟ್ಟಿ ಥಾಮಸ್,ಪಟ್ಟಣಪಂಚಾಯತ್ ಸದಸ್ಯರಾದ ಮಹ್ಮದಜಾಫರ ಹಂಡಿ, ಮಹ್ಮದಗೌಸ ಮಕಾನದಾರ ಸೇರಿದಂತೆ ಗೋಪಾಲ ಪಾಟೀಲ, ಭಾರತಿ, ಅಕ್ಬರಬಾಷಾ ದುಂಡಶಿ, ಜೈನೂ ಬೆಂಡಿಗೇರಿ, ಆಸೀಫ ಮಕಾನದಾರ, ಇರ್ಫಾನ ಸವಣೂರ ಮುಂತಾದವರು ಇದ್ದರು