ಮೇ 28ರಂದು ನೂತನ ಸಂಸತ್ ಕಟ್ಟಡ ಉದ್ಘಾಟಿಸಲಿರುವ ಪ್ರಧಾನಿ ಮೋದಿ ಬಹಿಷ್ಕಾರಕ್ಕೆ ಪ್ರತಿಪಕ್ಷಗಳ ಚಿಂತನೆ; ರಾಷ್ಟ್ರಪತಿಯಿಂದಲೇ ನೂತನ ಸಂಸತ್ ಕಟ್ಟಡ ಉದ್ಘಾಟನೆಗೆ ಆಗ್ರಹ;

Source: Vb | By I.G. Bhatkali | Published on 23rd May 2023, 8:45 AM | National News |

ಹೊಸದಿಲ್ಲಿ: ನೂತನ ಸಂಸತ್ ಕಟ್ಟಡವನ್ನು ಹಿಂದುತ್ವ ಸಿದ್ಧಾಂತದ ಪ್ರತಿಪಾದಕ ವಿ.ಡಿ. ಸಾವರ್ಕ‌್ರರ ಜನ್ಮದಿನವಾದ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಬಹಿಷ್ಕರಿಸುವ ಬಗ್ಗೆ ಪ್ರತಿಪಕ್ಷಗಳು ಯೋಚಿಸುತ್ತಿವೆ ಎನ್ನಲಾಗಿದೆ.

ಈ ಕಟ್ಟಡದ ಪಂಚಾಂಗಕ್ಕೆ ಅಡಿಗಲ್ಲನ್ನೂ 2020 ಡಿಸೆಂಬರ್‌ನಲ್ಲಿ ಪ್ರಧಾನಿಯೇ ಹಾಕಿದ್ದರು. ಅಂದೂ ಕಾಂಗ್ರೆಸ್ ಮತ್ತು ಇತರ ಹಲವಾರು ಪ್ರತಿಪಕ್ಷಗಳು ಆ ಕಾರ್ಯಕ್ರಮದಿಂದ ದೂರವೇ ಉಳಿದಿದ್ದವು. ಇಂಥ ಕಟ್ಟಡವೊಂದಕ್ಕೆ ಅಡಿಗಲ್ಲು ಹಾಕುವ ಸಮಯ ಅದಲ್ಲ ಎನ್ನುವುದು ಪ್ರತಿಪಕ್ಷಗಳ ನಿಲುವಾಗಿತ್ತು. ಯಾಕೆಂದರೆ, ಆಗ ರೈತರು ಕೇಂದ್ರ ಸರಕಾರದ ಕೃಷಿ ಕಾನೂನುಗಳ ವಿರುದ್ಧ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಕೊರೋನ ವೈರಸ್ ಸಾಂಕ್ರಾಮಿಕವು ವ್ಯಾಪಕವಾಗಿ ಹರಡಿತ್ತು. ಈ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೇರಲಾದ ದೇಶವ್ಯಾಪಿ ಲಾಕ್ ಡೌನ್‌ಗಳ ಪರಿಣಾಮವಾಗಿ ಜನರು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು.

ಚುನಾವಣಾ ಉದ್ದೇಶಕ್ಕಾಗಿ ಮಾತ್ರ ದಲಿತ, ಬುಡಕಟ್ಟು ರಾಷ್ಟ್ರಪತಿಗಳ ನೇಮಕ: ಖರ್ಗೆ

ಮೋದಿ ಸರಕಾರವು 'ದಲಿತ ಮತ್ತು ಬುಡಕಟ್ಟು ಸಮುದಾಯಗಳ ಜನರನ್ನು ರಾಷ್ಟ್ರಪತಿಯಾಗಿ ಆರಿಸುವುದು ಕೇವಲ ಚುನಾವಣಾ ಉದ್ದೇಶಗಳಿಗಾಗಿ ಎಂಬಂತೆ ಕಾಣುತ್ತದೆ. ನೂತನ ಸಂಸತ್ ಕಟ್ಟಡಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ನ್ನು ಆಹ್ವಾನಿಸಲಾಗಿರಲಿಲ್ಲ. ಈಗ ನೂತನ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿ ದೌಪದಿ ಮುರ್ಮುರನ್ನೂ ಆಹ್ವಾನಿಸಲಾಗಿಲ್ಲ. ನೂತನ ಸಂಸತ್ ಕಟ್ಟಡವನ್ನು ದೌಪದಿ ಮುರ್ಮು ಉದ್ಘಾಟಿಸಿದ್ದರೆ, ಅದು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ಔಚಿತ್ಯಕ್ಕೆ ಸರಕಾರದ ಬದ್ಧತೆಯನ್ನು ಸೂಚಿಸುತ್ತಿತ್ತು. 
ಮಲ್ಲಿಕಾರ್ಜುನ ಖರ್ಗೆ,
ಕಾಂಗ್ರೆಸ್ ಅಧ್ಯಕ್ಷ

ನೂತನ ಸಂಸತ್ ಕಟ್ಟಡವನ್ನು ಮೋದಿ ಉದ್ಘಾಟಿಸುವುದನ್ನು ಹೆಚ್ಚಿನ ಪ್ರತಿಪಕ್ಷಗಳು ಟೀಕಿಸಿವೆ. ಕಟ್ಟಡವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಬೇಕು ಎನ್ನುವುದು ಭಾಗವಹಿಸಬೇಕೇ ಅಥವಾ ದೂರ

ಅವುಗಳ ವಾದವಾಗಿದೆ. ಕಾರ್ಯಕ್ರಮದಲ್ಲಿ ಉಳಿಯಬೇಕೇ ಎನ್ನುವ ಬಗ್ಗೆ ಪ್ರತಿಪಕ್ಷಗಳು ಜಂಟಿ ನಿಲುವೊಂದನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿವೆ.

ನೂತನ ಸಂಸತ್ ಕಟ್ಟಡವನ್ನು ಸಾವರ್ಕರ್ ಜನ್ಮದಿನದಂದು ಉದ್ಘಾಟಿಸಲಾಗುತ್ತದೆ ಎನ್ನುವುದು ತಿಳಿದುಬಂದ ಬಳಿಕ, ಕಾಂಗ್ರೆಸ್ ತನ್ನ ನಿಲುವನ್ನು ಕಠಿಣಗೊಳಿಸುತ್ತಿದೆ. ಆದರೆ, ಈಗ ಸಾವರ್ಕರ್ ವಿಷಯ ಕಾಂಗ್ರೆಸ್‌ಗೆ ಬಿಸಿ ತುಪ್ಪದಂತೆ ಆಗಿದೆ. ಯಾಕೆಂದರೆ, ಸಾವರ್ಕರ್ ಮೇಲಿನ ಯಾವುದೇ ದಾಳಿಯನ್ನು ತಾನು ಸಹಿಸುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಮಿತ್ರಪಕ್ಷವಾಗಿರುವ ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ)ಯು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದೆ.

ಜಂಟಿ ಅಧಿವೇಶನಕ್ಕೆ 1,280 ಸದಸ್ಯರಿಗೆ ಸ್ಥಳಾವಕಾಶ:
ನೂತನ ಸಂಸತ್ ಕಟ್ಟಡದ ಲೋಕಸಭಾ ವಿಭಾಗದಲ್ಲಿ 888 ಸದಸ್ಯರು ಮತ್ತು ರಾಜ್ಯಸಭಾ ವಿಭಾಗದಲ್ಲಿ 300 ಸದಸ್ಯರು ಕುಳಿತು ಕೊಳ್ಳ ಬಹುದಾಗಿದೆ ಎಂದು ಲೋಕಸಭಾ ಕಾರ್ಯಾಲಯ ತಿಳಿಸಿದೆ.
ಉಭಯ ಸದನಗಳ ಜಂಟಿ ಅಧಿವೇಶನದ ಸಂದರ್ಭದಲ್ಲಿ ಲೋಕಸಭಾ ವಿಭಾಗದಲ್ಲಿ ಒಟ್ಟು 1,280 ಸದಸ್ಯರು ಕುಳಿತುಕೊಳ್ಳಬಹುದಾಗಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನ ಇನ್ನೊಂದು ಮಿತ್ರಪಕ್ಷವಾಗಿರುವ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಕೂಡ, ಸಾವರ್ಕರ್ ವಿರುದ್ಧ ದಾಳಿ ನಡೆಸದಂತೆ ಹಿಂದೊಮ್ಮೆ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದರು.

ಸೋಮವಾರ ನರೇಂದ್ರ ಮೋದಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸರಕಾರವು ರಾಷ್ಟ್ರಪತಿ ಕಚೇರಿಯನ್ನು ಕೇವಲ ತೋರಿಕೆಗಾಗಿ ಇರುವ ಕಚೇರಿಯ ಮಟ್ಟಕ್ಕೆ ಇಳಿಸಿದೆ ಎಂದು ಆರೋಪಿಸಿದ್ದಾರೆ.

ಇದಕ್ಕೂ ಒಂದು ದಿನ ಮೊದಲು, ಅಂದರೆ ರವಿವಾರ, ನೂತನ ಸಂಸತ್ ಕಟ್ಟಡವನ್ನು ರಾಷ್ಟ್ರಪತಿಯವರು ಉದ್ಘಾಟಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಕಳೆದ ವಾರ, ಕಾಂಗ್ರೆಸ್ ಸಂಪರ್ಕ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೀಗೆ ಟ್ವಿಟ್ ಮಾಡಿದ್ದರು: ನಮ್ಮ ದೇಶದ 66 ಸ್ಥಾಪಕರೆಲ್ಲರಿಗೂ ಮಾಡಲಾದ ಅವಮಾನ. ಗಾಂಧಿ, ನೆಹರೂ, ಪಟೇಲ್, ಬೋಸ್ ಮುಂತಾದವರ ತಿರಸ್ಕಾರ. ಡಾ. ಅಂಬೇಡ್ಕರ್‌ಗೆ ಅವಮಾನ'.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...