ದ್ವೇಷ ಪ್ರಚಾರಕರ ಖಂಡನೆ ಮುಂದುವರಿಸುವೆ; ಮುಹಮ್ಮದ್ ಝುಬೈರ್

Source: Vb | By I.G. Bhatkali | Published on 24th July 2022, 11:44 AM | State News | National News |
ಹೊಸದಿಲ್ಲಿ: ತನ್ನ ವಿರುದ್ಧದ ಎಲ್ಲ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡು ಎರಡು ದಿನಗಳ ಹಿಂದೆಯಷ್ಟೇ ಇಲ್ಲಿನ ತಿಹಾರ್ ಜೈಲಿನಿಂದ ಬಿಡುಗಡೆಗೊಂಡಿರುವ ಪತ್ರಕರ್ತ ಹಾಗೂ ಆಲ್ಟ್ ನ್ಯೂಸ್‌ನ ಸಹಸ್ಥಾಪಕ ಮುಹಮ್ಮದ್ ಝುಬೈರ್ ಅವರು, ದ್ವೇಷ ಪ್ರಚಾರಕರನ್ನು ಖಂಡಿಸುವುದನ್ನು ತಾನು ಮುಂದುವರಿಸುವುದಾಗಿ ಹೇಳಿದ್ದಾರೆ.

ಹೊಸ ಫೋನ್ ಮತ್ತು ಸಿಮ್ ಕಾರ್ಡ್ ಪಡೆದ ಬಳಿಕ ಟ್ವಿಟರ್ ಖಾತೆಯನ್ನು ಸ್ಥಾಪಿಸಿ ಟೀಟಿಸುವುದು ಮತ್ತು ಸುಳ್ಳುಸುದ್ದಿಗಳನ್ನು ಬಯಲಿಗೆಳೆಯುವುದು ತಾನು ಮಾಡಲಿರುವ ಮೊದಲ ಕೆಲಸವಾಗಿದೆ. ದ್ವೇಷ ಪ್ರಚಾರಕರ ಖಂಡನೆಯನ್ನೂ ಮುಂದುವರಿಸುತ್ತೇನೆ ಎಂದು ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಝುಬೈರ್ ತಿಳಿಸಿದರು.

ಪ್ರವಾದಿ ಮುಹಮ್ಮದರ್ ಕುರಿತು ಬಿಜೆಪಿ ನಾಯಕಿ ನೂಪುರ್ ಶರ್ಮಾರ ನಿಂದನಾತ್ಮಕ ಹೇಳಿಕೆಯ ಬಗ್ಗೆ ಟ್ವಿಟ್ ಪೋಸ್ಟ್ ಮಾಡಿದಾಗಲೇ ತಾನು ಬಂಧನವನ್ನು ನಿರೀಕ್ಷಿಸಿದ್ದೆ ಅವರು ತನ್ನ ಹಿಂದೆ ಬೀಳಲಿದ್ದಾರೆ ಎನ್ನುವುದು ತನಗೆ ಖಚಿತವಾಗಿ ಗೊತ್ತಿತ್ತು. ಆದರೆ ಅವರು ಅಷ್ಟೊಂದು ಪ್ರತೀಕಾರದ ನಿಲುವನ್ನು ಹೊಂದಿರುತ್ತಾರೆ ಎನ್ನುವುದು ಗೊತ್ತಿರಲಿಲ್ಲ. ವ್ಯವಸ್ಥೆಯು ಅಷ್ಟೊಂದು ಕೆಟ್ಟಿರಲಿಕ್ಕಿಲ್ಲ ಎಂದು ತಾನು ಭಾವಿಸಿದ್ದೆ ಎಂದರು. ತನ್ನ ಟ್ವಿಟ್ ಶರ್ಮಾರನ್ನು ಗುರಿಯಾಗಿಸಿಕೊಂಡಿರಲಿಲ್ಲ, ಆದರೆ ಮುಖ್ಯವಾಹಿನಿ ಮಾಧ್ಯಮಗಳು ಉತ್ತೇಜಿಸಿದ್ದ ದ್ವೇಷ ಭಾಷಣವನ್ನು ಖಂಡಿಸುವುದು ತನ್ನ ಉದ್ದೇಶವಾಗಿತ್ತು ಎಂದು ಹೇಳಿದ ಝುಬೈರ್, ಗೋದಿ ಮೀಡಿಯಾ ಉದ್ದೇಶಪೂರ್ವಕವಾಗಿ ಸುಳ್ಳುಸುದ್ದಿಗಳನ್ನು ಹರಡುತ್ತಿತ್ತು. ಇದು ಸ್ವಲ್ಪ ಚಿಂತೆಯ,ಸ್ವಲ್ಪ ತೊಂದರೆಯ ವಿಷಯವಾಗಿತ್ತು. ಅದನ್ನು ಬಯಲುಗೊಳಿಸಲು ತಾನು ಬಯಸಿದ್ದೆ ಎಂದರು.

ಸರಕಾರದ ಪರ ನಿಲುವು ಹೊಂದಿರುವ ಮಾಧ್ಯಮಗಳನ್ನು ಉಲ್ಲೇಖಿಸಲು 'ಗೋದಿ ಮೀಡಿಯಾ' ಪದವನ್ನು ಬಳಸಲಾಗುತ್ತದೆ. ಮೇ 27ರಂದು ಮಾಡಿದ್ದ ಟ್ವಿಟ್‌ನಲ್ಲಿ ಮೂವರು ಹಿಂದುತ್ವವಾದಿ ನಾಯಕರನ್ನು ಖಂಡಿಸಿದ್ದಕ್ಕಾಗಿ ತನ್ನ ವಿರುದ್ಧ ದಾಳಿಯನ್ನು ನಿರೀಕ್ಷಿಸಿದ್ದೆ ತನ್ನನ್ನು ಕಾನೂನಿನ ಬಲೆಯಲ್ಲಿ ಸಿಲುಕಿಸಲು ಅವರು ದೃಢ ನಿರ್ಧಾರವನ್ನು ಮಾಡಿದ್ದರು,ಆದರೆ ಅವರಿಗೆ ತನ್ನ ವಿರುದ್ಧ ಏನೂ ಸಿಕ್ಕಿರಲಿಲ್ಲ. ಹೀಗಾಗಿ ಅವರು ನಾಲ್ಕು ವರ್ಷಗಳ ಹಿಂದಿನ ತನ್ನ ಟ್ವಿಟ್‌ ನ್ನು ಕೆದಕಿ ತೆಗೆದಿದ್ದರು ಎಂದು ಝುಬೈರ್ ಹೇಳಿದರು.

'2018ರಲ್ಲಿ ಮಾಡಿದ್ದ ಆ ಟೀಟ್‌ನಲ್ಲಿ ಧರ್ಮದ ಕುರಿತು ಏನೂ ಇರಲಿಲ್ಲ. ಅದು ರಾಜಕೀಯ ಪಕ್ಷವೊಂದರ ಕುರಿತಾಗಿತ್ತು. ಅವರು ಅದನ್ನು ನಾನು ಹಿಂದೂ ದೇವತೆಗಳನ್ನು ನಿಂದಿಸಿದ್ದೇನೆ ಎಂದು ಕಾಣಿಸುವ ಹಾಗೆ ತಿರುಚಿದ್ದರು ಎಂದರು.

ತನ್ನ ಬಂಧನದ ಬಳಿಕ ದಿಲ್ಲಿ ಪೊಲೀಸರು ಆಲ್ಬನ್ಯೂಸ್ ಸ್ವೀಕರಿಸಿದ್ದ ದೇಣಿಗೆಗಳ ಕುರಿತು ತನ್ನನ್ನು ಪ್ರಶ್ನಿಸಿದ್ದರು,2018ರ ಟ್ವಿಟ್‌ನ ಕುರಿತು ಅಲ್ಲ ಎಂದ ಝುಬೈರ್, ಅವರು ಟ್ವಿಟ್ ಕುರಿತು ಎಫ್‌ಐಆರ್ ದಾಖಲಿಸಿದ್ದಿರಬಹುದು, ಆದರೆ ಅವರು ತನಗೆ ಎಲ್ಲ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ತನ್ನನ್ನು ಸಿಲುಕಿಸಲು ಅವರು ಗಟ್ಟಿ ನಿರ್ಧಾರವನ್ನು ಮಾಡಿದ್ದಾರೆ ಎನ್ನುವುದು ತನಗೆ ಸ್ಪಷ್ಟವಾಗಿತ್ತು ಎಂದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...