ಕುಮಟಾದಲ್ಲಿ ವಿದ್ಯುತ್ ಸ್ಪರ್ಷಿಸಿ ಯುವಕ ಸಾವು
ಕುಮಟಾ: ಮೊಬೈಲ್ ಚಾರ್ಜ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ಶಾಖ್ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಊರಕೇರಿಯಲ್ಲಿ ನಡೆದಿದೆ.
ಊರಕೇರಿಯ ತಲಗೋಡ ನಿವಾಸಿ ಜಗದೀಶ ಮಾಸ್ತಿ ಪಟಗಾರ(23) ಮೃತ ವ್ಯಕ್ತಿ ಎಂದು ಹೇಳಲಾಗಿದೆ.
ತಾವು ಹೊಸದಾಗಿ ನಿರ್ಮಿಸುತ್ತಿದ್ದ ಮನೆಗೆ ಹಳೆ ಮನೆಯ ವಿದ್ಯುತ್ ಮೀಟರಿನಿಂದ ತಾತ್ಕಾಲಿಕವಾಗಿ ವಯರ್ಗಳಿಂದ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದು ಸ್ನಾನಕ್ಕೆ ಹೋಗುವ ಜಗದೀಶ ಪಟಗಾರ ಮೊಬೈಲ್ ಚಾರ್ಜ್ ಹಾಕುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.